Advertisement

ಮಂಗಳೂರು: ಕೆಲಸ ಸಿಗದೆ ಖಿನ್ನತೆ…ಎಂಜಿನಿಯರಿಂಗ್‌ ಪದವೀಧರ ನಾಪತ್ತೆ

12:08 AM Mar 07, 2023 | Team Udayavani |

ಮಂಗಳೂರು : ಎಂಜಿನಿಯರಿಂಗ್‌ ಪದವೀಧರ ರಂಜಾಳ ಆಶಿಶ್‌ ಪ್ರಭು (24) ಅವರು ಮಾ. 5ರಂದು ಮನೆ ಬಿಟ್ಟು ಹೋದವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಗಿದೆ.

Advertisement

ಆಶಿಶ್‌ ಅವರು ಕೆಲಸ ಸಿಗದೆ ಖಿನ್ನತೆಯಿಂದ ಬಳಲುತ್ತಿದ್ದರು. ಕೆಲಸ ಹುಡುಕುವಂತೆ ತಂದೆ ಹೇಳಿದಾಗ ಮನೆ ಬಿಟ್ಟು ಹೋಗುವುದಾಗಿ ತಿಳಿಸಿ ಮೊಬೈಲ್‌ ಪೋನ್‌ ಅನ್ನು ಮನೆಯಲ್ಲಿಯೇ ಇಟ್ಟು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಾಧಾರಣ ಶರೀರ, ಎಣ್ಣೆಗಪ್ಪು ಮೈಬಣ್ಣ, ದುಂಡು ಮುಖ, 5.9 ಅಡಿ ಎತ್ತರ ಹೊಂದಿದ್ದು, ಕನ್ನಡ, ಇಂಗ್ಲಿಷ್‌, ಹಿಂದಿ, ಕೊಂಕಣಿ ಭಾಷೆ ಮಾತನಾಡುತ್ತಾರೆ. ಅವರ ಮಾಹಿತಿ ದೊರೆತವರು ಮಂಗಳೂರು ಪೂರ್ವ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next