Advertisement

ಅಪಘಾತ ಎಸಗಿದ ಲಾರಿ ಚಾಲಕನಿಗೆ 6 ತಿಂಗಳು ಶಿಕ್ಷೆ ವಿಧಿಸಿದ ನ್ಯಾಯಾಲಯ

12:36 AM Sep 22, 2022 | Team Udayavani |

ಸುರತ್ಕಲ್‌: ಸುರತ್ಕಲ್‌ ಸಮೀಪ ಪಡ್ರೆ ಬಳಿ 2014ರಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಪ್ರಕರಣದ ಆರೋಪಿ ಲಾರಿ ಚಾಲಕ ಪರಮೇಶ್ವರ ಅವರಿಗೆ ಮಂಗಳೂರು ನ್ಯಾಯಾಲಯವು 6 ತಿಂಗಳ ಕಾರಾಗೃಹ ಶಿಕ್ಷೆ, 7,500ರೂ.ದಂಡ, ತಪ್ಪಿದಲ್ಲಿ ಮತ್ತೆ 3 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ನ್ಯಾಯಾಧೀಶೆ ಅಂಜಲಿ ಶರ್ಮ ತೀರ್ಪು ನೀಡಿದ್ದಾರೆ.

Advertisement

2014ರ ಮೇ 12ರಂದು ಲಾರಿ ರಿಕ್ಷಾ ನಡುವೆ ನಡೆದ ಅಪಘಾತದಲ್ಲಿ ಸವಿತ ಶ್ರೀನಾಥ ಇವರ ಮಕ್ಕಳಾದ ನಿಸ್ಮಿತ, ಮನಿಷಾ,ರಿಕ್ಷಾ ಚಾಲಕ ಸುನೀಲ್‌ ಯಾನೇ ನವೀನ್‌ ಮೃತಪಟ್ಟಿದ್ದರು.

ಈ ಹಿಂದಿನ ಸಿಐ ನಟರಾಜ್‌ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ಸಹಾಯಕ ಸರ್ಕಾರಿ ಅಭಿಯೋಜಕರಾದ ಗೀತಾ ರೈ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next