Advertisement

Mangaluru: ಜು.31ರಂದು ನೃತ್ಯ ಶಂಕರ ಸರಣಿ 4

10:32 AM Jul 29, 2023 | Team Udayavani |

ಮಂಗಳೂರು: ನೃತ್ಯ ಶಂಕರ ಸರಣಿ 4 ಕಾರ್ಯಕ್ರಮವು ಜು.31ರ ಸೋಮವಾರ ಸಂಜೆ 6.25 ರಿಂದ 7.25ರ ವರೆಗೆ ಕೊಡವೂರಿನ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ನಡೆಯಲಿದೆ.

Advertisement

ಪ್ರಸ್ತುತಿ: ಮಂಗಳೂರಿನ ಅದಿತಿ ಲಕ್ಷ್ಮಿ ಭಟ್

ನಗರದ ನೃತ್ಯಾಂಗನ್ ನ ರಾಧಿಕಾ ಶೆಟ್ಟಿ ಅವರ ಶಿಷ್ಯೆ, ಡಾ|| ಕಿರಣ್ ಕುಮಾರ್ ಹಾಗೂ ಡಾ|| ಚೈತ್ರ ಲಕ್ಷ್ಮಿ ಬಿ. ದಂಪತಿಯ ಪುತ್ರಿ ಅದಿತಿಲಕ್ಷ್ಮಿ ಭಟ್ ತನ್ನ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಪ್ರಾರಂಭಿಸಿ ಕರ್ನಾಟಕ, ಕೇರಳ, ತಮಿಳುನಾಡು.. ಹೀಗೆ ವಿವಿಧೆಡೆ ಭರತನಾಟ್ಯ ಕಾರ್ಯಕ್ರಮ ಪ್ರದರ್ಶಿಸಿದ್ದಾಳೆ.

ವಿವಿಧ ಕಲಾ ಪ್ರಕಾರಗಳ ಬಗ್ಗೆಯೂ ಅಪಾರ ಒಲವು ಹೊಂದಿರುವ ಈಕೆ ಅದಕ್ಕಾಗಿ ಬಹಳಷ್ಟು ಶ್ರಮವಹಿಸಿ ಅಭ್ಯಸಿಸುತ್ತಿದ್ದಾಳೆ.ಭರತನಾಟ್ಯದ ಜೊತೆಗೆ ಬೆಂಗಳೂರಿನ ಅನುಪಮಾ ಮಂಜುನಾಥ್ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ಕಲಿಯುತ್ತಿದ್ದಾಳೆ.ನೃತ್ಯಾಂಗನ್ ನ ಸಮೂಹ ಪ್ರಸ್ತುತಿಯ ಭಾಗವಾಗಿ  ಅನೇಕ ಕಡೆ ಪ್ರದರ್ಶನ ನೀಡಿರುತ್ತಾಳೆ.

ಹಲವಾರು ಆನ್ಲೈನ್ ಮತ್ತು ಆಫ್ಲೆನ್ ಕಾರ್ಯಕ್ರಮಗಳಲ್ಲಿ ನೃತ್ಯಾಂಗನ್ ಸಂಸ್ಥೆಯ ಮುಖಾಂತರ ಜಿಲ್ಲೆ, ರಾಜ್ಯ,ಹಾಗೂ ಅಂತರಾಜ್ಯಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಪ್ರಸ್ತುತಿಯನ್ನು ಪ್ರದರ್ಶಿಸಿರುತ್ತಾಳೆ

Advertisement

ಈಕೆ ಈಸ್ಟರ್ನ್ ವಿಭಾಗದಲ್ಲಿ ಗಾಯನ, ಕಥೆ ಹೇಳುವುದು,ಒಲಿಂಪಿಯಾಡ್, ಏಕವ್ಯಕ್ತಿ ನೃತ್ಯಗಳಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪಡೆದಿದ್ದಾಳೆ.

ಅದಿತಿ ಹಲವಾರು ವಿಜ್ಞಾನ ಪ್ರದರ್ಶನ, ಚಿತ್ರ, ಭರತನಾಟ್ಯ ಕಾರ್ಯಾಗಾರಗಳಲ್ಲಿ ಭಾಗವಹಿಸಿರುತ್ತಾಳೆ. ಮಹಾಕಾವ್ಯ, ಪುರಾಣಗಳನ್ನು ಓದುವ ಹವ್ಯಾಸವನ್ನೂ ಹೊಂದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next