Advertisement

ಮಂಗಳೂರು- ಬೆಂಗಳೂರು ರೈಲು ಕೇರಳ ಮೂಲಕ ಸಂಚಾರ ಆರಂಭ 

12:02 PM Aug 21, 2018 | Team Udayavani |

ಮಂಗಳೂರು: ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಕೇರಳದ ರೈಲು ಮಾರ್ಗದಲ್ಲಿ ಕೆಲವು ರೈಲುಗಳ ಸಂಚಾರ ಪುನರಾರಂಭಗೊಂಡಿದ್ದು, ಮಂಗಳೂರು- ಬೆಂಗಳೂರು ರೈಲನ್ನು ಮಾರ್ಗ ಬದಲಾಯಿಸಿ ಶೋರ್‌ನೂರು- ಪಾಲಕ್ಕಾಡ್‌- ತಿರುಪತ್ತೂರು ಮಾರ್ಗದಲ್ಲಿ ಸಂಚರಿಸಲಿದೆ.  

Advertisement

ಸುಬ್ರಹ್ಮಣ್ಯ- ಸಕಲೇಶಪುರ ನಡುವೆ ಭೂಕುಸಿತ ಸಂಭವಿಸಿದ ದುರಸ್ತಿ ಪೂರ್ಣ ಗೊಂಡಿಲ್ಲ. ಪ್ರಯಾಣಿಕರ ಹಿತ ದೃಷ್ಟಿಯಿಂದ ರೈಲನ್ನು ಶೋರ್‌ನೂರು- ಪಾಲಕ್ಕಾಡ್‌ ಮಾರ್ಗವಾಗಿ ಕಾರ್ಯಾಚರಿಸಲಿದೆ. ಕಾರವಾರ- ಮಂಗಳೂರು- ಬೆಂಗಳೂರು (16514 / 16512) ಎಕ್ಸ್‌ಪ್ರೆಸ್‌, ಕಣ್ಣೂರು – ಯಶವಂತ ಪುರ (16528) ಎಕ್ಸ್‌ ಪ್ರಸ್‌ ರೈಲು, ಮಂಗಳೂರು ಸೆಂಟ್ರಲ್‌- ಯಶವಂತಪುರ (16566) ರೈಲುಗಳು ಆ. 20ರಿಂದ ಶೋರ್‌ನೂರು- ಪಾಲಕ್ಕಾಡ್‌ ಮಾರ್ಗವಾಗಿ ಸಂಚರಿಸು ತ್ತಿವೆ.  ಕೊಯಮುತ್ತೂರು- ಹುಬ್ಬಳ್ಳಿ ಮಧ್ಯೆ ವಿಶೇಷ ರೈಲಿನ ವ್ಯವಸ್ಥೆ ಯನ್ನೂ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೇಯ ಪಾಲಕ್ಕಾಡ್‌ ವಿಭಾಗದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next