Advertisement

Mangaluru ಬಿಯರ್‌ ಬಾಟಲಿಗಳಿಂದ ಹಲ್ಲೆಗೈದು ಕೊಲೆಯತ್ನ

11:15 PM Nov 13, 2023 | Team Udayavani |

ಮಂಗಳೂರು: ವ್ಯಕ್ತಿ ಯೋರ್ವರಿಗೆ ಬಿಯರ್‌ ಹಾಗೂ ಸೋಡಾ ಬಾಟಲಿಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ ಶನಿವಾರದಂದು ನಗರದ ಕೊಟ್ಟಾರ ಚೌಕಿಯಲ್ಲಿ ಸಂಭವಿಸಿದೆ.

Advertisement

ಅಶೋಕ್‌ ಪೂಜಾರಿ ಗಾಯ ಗೊಂಡವರು. ಅಶೋಕ್‌ ಅವರು ರಾತ್ರಿ 10 ಗಂಟೆಗೆ ಕೊಟ್ಟಾರ ಚೌಕಿಯಲ್ಲಿರುವ ಬಾರ್‌ನಿಂದ ಮದ್ಯ ಖರೀದಿ ಮಾಡಲು ಹೋಗಿದ್ದಾಗ ಕೌಂಟರ್‌ ಬಳಿ ಇದ್ದ ಅನೂಪ್‌ ಮತ್ತು ರೀತು ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಆಗ ಅವರನ್ನುದ್ದೇಶಿಸಿ ಅಶೋಕ್‌ ಅವರು ಬಾರಿನ ಒಳಗಡೆ ಗಲಾಟೆ ಮಾಡಬೇಡಿ, ಹೊರಗಡೆ ಹೋಗಿ ಎಂದು ಹೇಳಿದಾಗ ರೀತು ವಿನಾ ಕಾರಣ ಅಶೋಕ್‌ ಅವರಿಗೆ ಅವಾಚ್ಯವಾಗಿ ಬೈದ. ಆಗ ಆತನನ್ನು ಅಶೋಕ್‌ ದೂರ ತಳ್ಳಿದ್ದರು.

ಇದರಿಂದ ಕೋಪಗೊಂಡ ರೀತು ಕೌಂಟರ್‌ನಲ್ಲಿದ್ದ ಬಿಯರ್‌ ಬಾಟಲಿಯಿಂದ ಅಶೋಕ್‌ ಅವರ ತಲೆಗೆ ಹೊಡೆದ. ಆತನ ಜತೆಗಿದ್ದ ವಿಶ್ವ ಸೋಡಾ ಬಾಟಲಿಯಿಂದ ಅಶೋಕ್‌ ಅವರ ತಲೆಗೆ ಹೊಡೆದಿದ್ದಾನೆ. ರೀತು ಬಿಯರ್‌ ಬಾಟಲಿಯ ಚೂರಿನಿಂದ ಅಶೋಕ್‌ ಅವರ ಕುತ್ತಿಗೆಗೆ ತಿವಿದಾಗ ಅಶೋಕ್‌ ತಲೆ ಬಗ್ಗಿಸಿದ ಪರಿಣಾಮ ಬಾಟಲಿಯ ಏಟು ಅವರ ತಲೆಗೆ ತಾಗಿ ಗಾಯಗೊಂಡಿದ್ದಾರೆ. ರೀತು ಮತ್ತು ವಿಶ್ವ ಅಶೋಕ್‌ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ ಎಂದು ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next