Advertisement

Mangaluru: ತಲವಾರು ದಾಳಿ; ಮೂವರ ಬಂಧನ

10:49 PM Aug 22, 2023 | Team Udayavani |

ಮಂಗಳೂರು: ತಲವಾರು ಬೀಸಿ ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಕಳೆದ ರವಿವಾರ ಕಾವೂರು ಠಾಣೆ ವ್ಯಾಪ್ತಿಯ ಎಂ.ವಿ.ಶೆಟ್ಟಿ ಕಾಲೇಜು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಅನ್ಯಕೋಮಿನ ವ್ಯಕ್ತಿಗೆ ಉರುಂದಾಡಿ ಗುಡ್ಡೆಯ ಚರಣ್‌ರಾಜ್‌ (23), ಹೊಸಬೆಟ್ಟಿನ ಸುಮಂತ್‌ ಬರ್ಮನ್‌ (24) ಹಾಗೂ ಕೋಡಿಕಲ್‌ನ ಅವಿನಾಶ್‌ (24) ಸ್ಕೂಟಿಯಲ್ಲಿ ಬಂದು ಅಡ್ಡಹಾಕಿ ತಲವಾರು ಬೀಸಿದ್ದರು. ವ್ಯಕ್ತಿ ತಪ್ಪಿಸಿಕೊಂಡಿದ್ದರು. ಆದರೆ ಅವರ ಮುಖಕ್ಕೆ ಗಾಯವಾಗಿತ್ತು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿ ಚರಣ್‌ರಾಜ್‌ ವಿರುದ್ಧ ಉರ್ವ, ಪಣಂಬೂರು, ಕಾವೂರು ಠಾಣೆಗಳಲ್ಲಿ ಈ ಹಿಂದೆ 5 ಪ್ರಕರಣಗಳು ದಾಖಲಾಗಿದ್ದವು. ಸುಮಂತ್‌ ಬರ್ಮನ್‌ ವಿರುದ್ಧ ಬರ್ಕೆ, ಪಣಂಬೂರು, ಕಾವೂರು ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು, ಅವಿನಾಶ್‌ ವಿರುದ್ಧ ಉರ್ವ, ಕಂಕನಾಡಿ ನಗರ ಠಾಣೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿದ್ದವು. ಉರ್ವ ಠಾಣೆಯಿಂದ ಗಡಿಪಾರು ಆದೇಶ ಹೊರಡಿಸಲಾಗಿತ್ತು. ಚರಣ್‌ ರೌಡಿಶೀಟರ್‌ ಆಗಿದ್ದಾನೆ. ಭಯ ಹುಟ್ಟಿಸುವುದು ಆರೋಪಿಗಳ ಉದ್ದೇಶವಾಗಿತ್ತು.

ಗಾಯಗೊಂಡವನು ಕೂಡ ಹಳೆಯ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಆರೋಪಿಗಳಿಂದ ತಲವಾರು ಮತ್ತು ದ್ವಿಚಕ್ರ ವಾಹನ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next