Advertisement

ಮಂಗಳೂರು: ಟ್ರಸ್ಟ್‌ನ ಅವಹೇಳನ, ಆರೋಪಿಗೆ ಸಮನ್ಸ್‌

12:24 AM Jan 21, 2023 | Team Udayavani |

ಮಂಗಳೂರು: ಶಾಸಕ ವೇದವ್ಯಾಸ ಕಾಮತ್‌ ಅಧ್ಯಕ್ಷರಾಗಿರುವ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ನ ಅವಹೇಳನ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಆರೋಪಿ ಎಂ. ವರದರಾಯ ಪ್ರಭು ಅವರಿಗೆ ಸಮನ್ಸ್‌ ಜಾರಿಗೊಳಿಸಿದೆ.

Advertisement

ಎಂ. ವರದರಾಯ ಪ್ರಭು ಅವರು ಟ್ರಸ್ಟ್‌ ಬಗ್ಗೆ ದ.ಕ. ಜಿಲ್ಲಾ ನೋಂದಣಾಧಿಕಾರಿಯವರು ಮತ್ತು ಮನಪಾ ಆಯುಕ್ತರಿಗೆ ಸುಳ್ಳು ದೂರು ಸಲ್ಲಿಸಿದ್ದು ಅದರ ಆಧಾರದಲ್ಲಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.

ಸೇವಾಂಜಲಿ ಟ್ರಸ್ಟ್‌ ಸುಮಾರು 18 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಟ್ರಸ್ಟಿಗಳು ಜಿಎಸ್‌ಬಿ ಸಮುದಾಯಕ್ಕೆ ಸೇರಿರುವ ವ್ಯಕ್ತಿಗಳಾಗಿದ್ದು ತನ್ನ ಮತ್ತು ಅವರ ಮೇಲೆ ವೈಯಕ್ತಿಕ ದ್ವೇಷದಿಂದ ಮಾನಹಾನಿ ಮಾಡುವ ಉದ್ದೇಶದಿಂದ ಎಂ.ವರದರಾಯ ಪ್ರಭು ಸುಳ್ಳು ದೂರು ನೀಡಿದ್ದಾರೆ ಎಂದು ಶಾಸಕರು ಅವರ ವಿರುದ್ಧ ನಗರದ ಜೆಎಂಎಫ್ಸಿ ಎರಡನೇ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next