Advertisement

ಮಂಗಳೂರು ಮೂಲದ ಟೆಕ್ಕಿಯ ಶವ ಭದ್ರಾ ನದಿಯಲ್ಲಿ ಪತ್ತೆ

02:01 PM Aug 09, 2018 | |

ಮಂಗಳೂರು: ಕಳೆದ 15 ದಿನಗಳ ಹಿಂದೆ ಕುದುರೆಮುಖಕ್ಕೆ ಪ್ರವಾಸಕ್ಕೆಂದು ಹೋಗಿ ಭದ್ರಾ ನದಿಯಲ್ಲಿ ನೀರಿಗೆ ಬಿದ್ದಿದ್ದ ಮಂಗಳೂರು ಮೂಲದ ಯುವಕನ ಶವ ಕೊನೆಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಗುಂಡಿ ಸಮೀಪದದ ನದಿಯಲ್ಲಿ ಪತ್ತೆಯಾಗಿದೆ.

Advertisement

ಮೃತ ಯುವಕನನ್ನು ಮಂಗಳೂರಿನ ತುಂಬೆ ಗ್ರಾಮದ ಕಿರಣ್ ಕೊಟ್ಯಾನ್ (26) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ತನ್ನ 13 ಮಂದಿ ಸ್ನೇಹಿತರ ಜೊತೆಗೆ ಕುದುರೆಮುಖ ಸುತ್ತಮುತ್ತ ಪ್ರವಾಸಕ್ಕೆಂದು ಬಂದಿದ್ದರು. 

ಅಂಬತೀರ್ಥದ ಭದ್ರಾ ನದಿಯಲ್ಲಿ ಸೆಲ್ಫಿ ತೆಗೆಯುವ ಸಂದರ್ಭ ಈ ಅವಘಡ ಸಂಭವಿಸಿದೆ. ಮೃತದೇಹಕ್ಕಾಗಿ ಕಳೆದ 15  ದಿನಗಳಿಂದ ಪೊಲೀಸರು, ಸ್ಥಳೀಯರು ಶೋಧಕಾರ‍್ಯ ನಡೆಸುತ್ತಿದ್ದರು.  ಕಳಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Advertisement

Udayavani is now on Telegram. Click here to join our channel and stay updated with the latest news.

Next