Advertisement

ಉದ್ಯೋಗಕ್ಕಾಗಿ ಕುವೈಟ್‌ಗೆ ತೆರಳಿದ ಮಂಗಳೂರು ಯುವಕರು ಸಂಕಷ್ಟದಲ್ಲಿ

12:00 PM May 26, 2019 | Team Udayavani |

ಮಂಗಳೂರು: ನೌಕರಿ ಕೊಡಿಸುವುದಾಗಿ ಹೇಳಿ ಕುವೈಟ್‌ಗೆ ಕರೆದುಕೊಂಡು ಹೋಗಿ, 6 ತಿಂಗಳಿನಿಂದ ಉದ್ಯೋಗವಿಲ್ಲದೆ ಮಂಗಳೂರು ಮೂಲದ ಸುಮಾರು 35 ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಂಗಳೂರು ಮೂಲದವರೇ ಆದ ವ್ಯಕ್ತಿಯೊಬ್ಬರು ಕಂಪೆನಿಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಂಬಿಸಿ ಕರೆದೊಯ್ದಿದ್ದರು. ಆದರೆ ನೌಕರಿಯೂ ಇಲ್ಲದೆ, ಸಂಬಳವೂ ಇಲ್ಲದೆ ಊಟಕ್ಕೂ ಪರದಾಡುವ ಪರಿಸ್ಥಿತಿ ಈ ಯುವಕರಿಗೆ ಬಂದಿದೆ. ತಮ್ಮನ್ನು ಸಂಕಷ್ಟದಿಂದ ಹೇಗಾದರೂ ಪಾರು ಮಾಡುವಂತೆ ವೀಡಿಯೋ ತೆಗೆದು ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

Advertisement

ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್‌ ಅವರು ಪ್ರತಿಕ್ರಿಯಿಸಿ, ವೀಡಿಯೋವನ್ನು ನಾನು ವೀಕ್ಷಿಸಿದ್ದೇನೆ. ಇವರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಕುವೈಟ್‌ನಲ್ಲಿ ಸಂಕಷ್ಟದಲ್ಲಿರುವ ಯುವಕರಲ್ಲಿ ಒಬ್ಬರ ಸಹೋದರ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ನನ್ನ ಸಹೋದರ ಸಹಿತ ಇನ್ನೂರು ಮಂದಿ ಉದ್ಯೋಗಕ್ಕಾಗಿ ನಾಲ್ಕು ತಿಂಗಳ ಹಿಂದೆ ಕುವೈಟ್‌ಗೆ ತೆರಳಿದ್ದರು. ಅಲ್ಲಿ ಕೆಲವರಿಗೆ ಕೆಲಸ ನೀಡಿದ್ದರೂ ಸಂಬಳವನ್ನೇ ನೀಡಿಲ್ಲ. ಇನ್ನು ಹಲವಾರು ಮಂದಿಗೆ ಕೆಲಸವನ್ನೂ ನೀಡಲಾಗಿಲ್ಲ. ಅಲ್ಲಿರುವ ಊರಿನವರ ಸಹಾಯದಿಂದ ಇಷ್ಟು ದಿನಗಳನ್ನು ಹೇಗೋ ಕಳೆದಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next