Advertisement

ಮಂಗಳೂರು: ಮಾರಕಾಯುಧ ಝಳಪಿಸಿ 3 ಗೋವುಗಳ ಕಳ್ಳತನ

12:34 PM Dec 03, 2021 | Team Udayavani |

ಮಂಗಳೂರು: ಶುಕ್ರವಾರ ಮುಂಜಾನೆ ಬಂಗ್ರಕೂಳೂರಿನಲ್ಲಿ ದನ ಕಳ್ಳರ ಅಟ್ಟಹಾಸ ಮೆರೆದಿದ್ದು, ನಸುಕಿನ 4 ಗಂಟೆಯ ವೇಳೆ ಗೋಲ್ಡ್ ಫಿಂಚ್ ಮುಂಭಾಗದಲ್ಲಿ ಮಾರಕಾಯುಧಗಳನ್ನು 3 ದನಗಳನ್ನು ಕದ್ದೊಯ್ದಿದ್ದಾರೆ.

Advertisement

ಕದ್ದ 2 ದನಗಳು ಉಮೇಶ್ ಮಲರಾಯಸಾನ ಮತ್ತು 1ದನ ಉದಯ ಶೆಟ್ಟಿ ಇವರದ್ದಾಗಿದೆ.

ಕಪ್ಪು ಬಣ್ಣದ ಸ್ಕೋರ್ಪಿಯೋ ವಾಹನದಲ್ಲಿ ಬಂದ ಗೋಕಳ್ಳರು ಮಾರಕಾಯುಧಗಳನ್ನು ಝಳಪಿಸಿ ದನಗಳನ್ನು ಕದ್ದುಕೊಂಡು ಹೋಗಿರುತ್ತಾರೆ.

ಈ ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವೂರು ಪ್ರಖಂಡವು ತೀವ್ರವಾಗಿ ಖಂಡಿಸಿದೆ. ಈ ಘಟನೆಯ ಹಿಂದೆ ಒಂದು ದೊಡ್ಡ ಜಾಲವೇ ಕಾರ್ಯಾಚರಿಸುತ್ತಿರುವ ಶಂಕೆಯಿದ್ದು, ಪೊಲೀಸ್ ಇಲಾಖೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಅಪರಾಧಿಗಳನ್ನು ಆದಷ್ಟು ಬೇಗ ಪತ್ತೆಹಚ್ಚಿ ಶಿಕ್ಷಿಸಬೇಕೆಂದು ಆಗ್ರಹಿಸಿದೆ.

ಮೂರು ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ಗೋ ಕಳ್ಳರು ಇಬ್ಬರು ಗೋ ರಕ್ಷಕರ ಮೇಲೆ ವಾಹನ ಹರಿಸಿ ಅಟ್ಟಹಾಸ ಮೆರೆದಿದ್ದರು. ಇಬ್ಬರು ಗಾಯಾಳುಗಳಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next