Advertisement

ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ: ಸಿದ್ಧರಾಮಯ್ಯ

04:30 PM Oct 18, 2019 | Naveen |

ಮಂಗಳೂರು: ಮಹಾರಾಷ್ಟ್ರಕ್ಕೆ ನೀರು ಬಿಡೋದಾಗಿ ಸಿಎಂ ಯಡಿಯೂರಪ್ಪ ಹೇಳಿಕೆ ವಿಚಾರ ಎಲೆಕ್ಷನ್ ಮತ್ತು ಓಟಿಗೋಸ್ಕರ ಯಡಿಯೂರಪ್ಪ ಆ ರೀತಿ ಹೇಳಿರಬಹುದು ಆದರೆ ಎರಡು ರಾಜ್ಯಗಳ ಮಧ್ಯೆ ಮಾತುಕತೆ ಆಗದೇ ಏನೂ ಮಾಡಲು ಆಗುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

Advertisement

ಅವರು ಶುಕ್ರವಾರದಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ವಿರುದ್ಧ ಮಾತನಾಡಿದರೆ ಐಟಿ ದಾಳಿ ಅನ್ನೋ ಬಿ.ಸಿ.ಪಾಟೀಲ್ ಹೇಳಿಕೆ ವಿಚಾರವಾಗಿ ನರೇಂದ್ರ ಮೋದಿ, ಅಮಿತ್ ಶಾ ಎಲ್ಲಾ ನನ್ನ ಜೇಬಲ್ಲಿದ್ದಾರಾ? ಅವ್ರೆಲ್ಲಾ ನಾವು ಹೇಳಿದ ಹಾಗೆ ಕೇಳುತ್ತಾರಾ? ಇದು ಬಾಲಿಷ ಹೇಳಿಕೆ, ಫೂಲಿಷ್ ನೆಸ್ ಎಂದರು.

ನಳಿನ್ ಗೆ ರಾಜ್ಯವೇ ಗೊತ್ತಿಲ್ಲ, ಮತ್ತೆ ಅವರು ಇನ್ನೇನು ಹೇಳುತ್ತಾರೆ? ಅವರಿಗೆ ಪಾಪ ಮಂಗಳೂರು ಬಿಟ್ಟರೆ ಮತ್ತೇನೂ ಗೊತ್ತಿಲ್ಲ, ಅದರಿಂದ ಹಾಗೆ ಹೇಳಿದ್ದಾರೆ ಅವರ ಜ್ಞಾನ ಅಷ್ಟೇ ಇರುವಾಗ ಇನ್ನೇನು ಮಾಡಕ್ಕಾಗುತ್ತದೆ ಎಂದರು.

ಕಾವೇರಿ ಗೆಸ್ಟ್ ಹೌಸ್ ನನಗೆ ಬೇಕು ಅಂತ ಪತ್ರ ಬರೆದಿದ್ದೇನೆ ಸಮ್ಮಿಶ್ರ ಸರ್ಕಾರದಲ್ಲಿ ಜಾರ್ಜ್ ಗೆ ಅದು ಸಿಕ್ಕಿದ್ರೂ ಅವರು ನನಗೆ ಬಿಟ್ಟು ಕೊಟ್ಡಿದ್ರು ಈಗ ನನಗೊಂದು ನಿವಾಸ ಕೊಡಬೇಕಲ್ವಾ? ಅದಕ್ಕೆ ಅದನ್ನೇ ಕೊಡಿ ಅಂತ ಬರೆದಿದ್ದೇನೆ ಅದರಲ್ಲಿ ತಪ್ಪೇನು? ಕೊಡೋದು ಬಿಡೋದು ಸರ್ಕಾರಕ್ಕೆ ಸೇರಿದ್ದು. ವರ್ಗಾವಣೆ ದಂಧೆ ಬಿಟ್ಟರೆ, ಆಡಳಿತದಲ್ಲಿ ಏನೂ ಕೆಲಸ ನಡೆಯುತ್ತಿಲ್ಲ ಪ್ರವಾಹ ಬಂದಿದ್ರೂ ಪರಿಹಾರದ ಕೆಲಸ ನಡೆಯುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next