Advertisement

ಮಂಗಳೂರು ಉತ್ತರ: ಮೂರನೇ ಹಂತದ ಪಡಿತರ ಕಿಟ್‌ ವಿತರಣೆ

01:30 AM May 16, 2020 | Sriram |

ಸುರತ್ಕಲ್‌: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅರ್ಹ ಫಲಾನುಭವಿಗಳಿಗೆ ಮೂರನೇ ಹಂತದ ಕಿಟ್‌ ವಿತರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಶಾಸಕ ಡಾ| ಭರತ್‌ ಶೆಟ್ಟಿ ವೈ. ಅವರು ಕಿಟ್‌ ತುಂಬಿದ ವಾಹನಗಳನ್ನು ಕಳಿಸಿಕೊಡುವ ಮೂಲಕ ಕಿಟ್‌ ವಿತರಣೆಯ ಅಭಿಯಾನಕ್ಕೆ ಚಾಲನೆ ನೀಡಿದರು.

Advertisement

ಈ ಸಂದರ್ಭ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಎರಡು ಬಾರಿ ಪಡಿತರ ಕಿಟ್‌ ವಿತರಣೆ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 45 ಸಾವಿರ ಪಡಿತರ ಕಿಟ್‌ ವಿತರಣೆ ಮಾಡಲಾಗಿದೆ. ಬಿಜೆಪಿ ಮುಖಂಡರು, ಕಾರ್ಪೊರೇಟರ್‌ಗಳು, ಕಾರ್ಯಕರ್ತರ ನೆರವಿನಲ್ಲಿ ವಿವಿಧ ಹಂತದಲ್ಲಿ ನೆರವು ಒದಗಿಸಲಾಗಿದೆ. ಇದೀಗ ಕ್ಷೇತ್ರದ ಎಲ್ಲೆಡೆ ಇರುವ ಅರ್ಹರಿಗೆ ಒಟ್ಟು 6 ಸಾವಿರ ಕಿಟ್‌ ಕಳುಹಿಸಿಕೊಡಲಾಗಿದೆ ಎಂದರು.

ಉತ್ತರ ಮಂಡಲದ ಅಧ್ಯಕ್ಷ ತಿಲಕ್‌ರಾಜ ಕೃಷ್ಣಾಪುರ, ಕಾರ್ಯದರ್ಶಿ ಪೂಜಾ ಪೈ, ರಾಜೇಶ್‌ ಕೊಠಾರಿ, ಸಂದೀಪ್‌ ಪಚ್ಚನಾಡಿ, ಬಿಜೆಪಿಯ ಮನಪಾ ಸದಸ್ಯರಾದ ಕಿರಣ್‌ ಕುಮಾರ್‌ ಕೋಡಿಕಲ್‌, ಸುಮಂಗಳ, ಶರತ್‌ ಕುಮಾರ್‌, ಜಯಾನಂದ ಅಂಚನ್‌, ಲೋಹಿತ್‌ ಅಮೀನ್‌, ಶ್ವೇತ ಪೂಜಾರಿ, ಲಕ್ಷ್ಮೀ ಶೇಖರ್‌ ದೇವಾಡಿಗ, ಲೋಕೇಶ್‌ ಬೊಳ್ಳಾಜೆ, ಸಂದೀಪ್‌ ಪಚ್ಚನಾಡಿ, ದಿನಕರ ಇಡ್ಯಾ, ವಿಠಲ ಸಾಲಿಯಾನ್‌ ಉಪಸ್ಥಿತರಿದ್ದರು.

ಕೋವಿಡ್-19 ಪಾಸಿಟಿವ್‌:
ಜನರಲ್ಲಿ ಎಚ್ಚರ ಅಗತ್ಯ
ಸುರತ್ಕಲ್‌ನಲ್ಲಿ ಕೋವಿಡ್-19 ಪಾಸಿಟಿವ್‌ ಕೇಸ್‌ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗಂಟಲ ದ್ರವ ಪರೀಕ್ಷೆಯಲ್ಲಿ ಕೋವಿಡ್‌ ಇರುವುದು ದೃಢಪಟ್ಟಿದೆ. ಅವರಿಗೆಯಾವ ರೀತಿಯಲ್ಲಿ ಸೋಂಕು ತಗಲಿದೆ ಎಂಬುದು ತಿಳಿಯಬೇಕಷ್ಟೆ. ಈಗಾಗಲೇ ಗುಡ್ಡೆಕೊಪ್ಲ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗುತ್ತದೆ. ಕ್ಷೇತ್ರದಲ್ಲಿ ಪ್ರಥಮ ಪ್ರಕರಣ ಇದಾಗಿದ್ದು, ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಡಾ| ಭರತ್‌ ಶೆಟ್ಟಿ ವೈ.ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next