Advertisement

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪಿಗೆ ಥಳಿತ

12:17 AM Jan 22, 2023 | Team Udayavani |

ಮಂಗಳೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದವನಿಗೆ ಸಾರ್ವಜನಿಕರು ಥಳಿಸಿ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ನಗರದ ಕಂಕನಾಡಿ ಬಳಿ ಶನಿವಾರ ಸಂಭವಿಸಿದೆ.

Advertisement

ಉಳ್ಳಾಲದ ನಿವಾಸಿ ನವಾಜ್‌ (35) ಪ್ರಕರಣದ ಆರೋಪಿ. 8 ವರ್ಷದ ಬಾಲಕಿ ಗಿಡವೊಂದರಿಂದ ಹಣ್ಣು ಕೀಳುತ್ತಿದ್ದಾಗ ಅಲ್ಲಿಯೇ ಸಮೀಪ ಗಾರೆ ಕೆಲಸ ಮಾಡುತ್ತಿದ್ದ ನವಾಜ್‌ ಲೈಂಗಿಕ ಕಿರುಕುಳ ನೀಡಿದ್ದ. ಆಗ ಬಾಲಕಿ ಬೊಬ್ಬೆ ಹಾಕಿದ್ದು, ಕೂಡಲೇ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ರೈಲು ಹಳಿಯಲ್ಲಿ ವ್ಯಕ್ತಿಯ ಶವ ಪತ್ತೆ
ಮಂಗಳೂರು: ಕುಳಾಯಿಗುಡ್ಡೆ ರೈಲ್ವೇ ಸೇತುವೆಯಿಂದ ಸುಮಾರು 200 ಮೀ. ದೂರ ಸುರತ್ಕಲ್‌ ಕಡೆಗೆ ರೈಲು ಹಳಿಯಲ್ಲಿ ಸುಮಾರು 30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಶುಕ್ರವಾರ ಸಂಜೆ ಪತ್ತೆಯಾಗಿದೆ. ಯಾವುದೋ ರೈಲು ಢಿಕ್ಕಿ ಹೊಡೆದು ಮೃತಪಟ್ಟಿರಬಹುದು. ಕಪ್ಪು ಬಣ್ಣದ ನೈಟ್‌ಪ್ಯಾಂಟ್‌, ಹಳದಿ ಬಣ್ಣದ ಉದ್ದ ತೋಳಿನ ಟೀ ಶರ್ಟ್‌, ಕಪ್ಪು ಬಣ್ಣದ ಜರ್ಕಿನ್‌ ಧರಿಸಿದ್ದಾರೆ. ಸುಮಾರು 5.6 ಅಡಿ ಎತ್ತರವಿದ್ದಾರೆ. ಅವರ ವಾರಸುದಾರರು ಇದ್ದರೆ ಸುರತ್ಕಲ್‌ ಪೊಲೀಸ್‌ ಠಾಣೆ (0824-2220540) ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next