Advertisement

ನಾಗಬನ ಭಗ್ನಗೊಳಿಸಿದವರ ಸುಳಿವು ಸಿಕ್ಕಿದೆ: ಡಾ. ಭರತ್ ಶೆಟ್ಟಿ ವೈ

03:18 PM Nov 26, 2021 | Team Udayavani |

ಸುರತ್ಕಲ್: ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ಅಲ್ಲಿನ ಆರಾಧನಾ ನಾಗನ ಕಲ್ಲುಗಳನ್ನು ಭಗ್ನಗೊಳಿಸಿ ಎಸೆದು ಕೋಮು ಸೌಹಾರ್ಧತೆ ಕದಡಲು ಸಂಚು ಹೂಡಿರುವುದು ಬಯಲಾಗಿದ್ದು,ಆರೋಪಿಗಳ ಸುಳಿವು ಪೊಲೀಸರಿಗೆ ದೊರೆತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಶುಕ್ರವಾರ ತಿಳಿಸಿದ್ದಾರೆ.

Advertisement

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಇಂದು ಶಾಂತಿಯುತವಾಗಿದ್ದು, ಜಿಲ್ಲೆಯಲ್ಲೂ ಯಾವುದೇ ಅಹಿತಕರ ಘಟನೆ ಗೆ ನಮ್ಮ ಸರಕಾರ ಆಸ್ಪದ ನೀಡಿಲ್ಲ. ಹೀಗಾಗಿ ಶಾಂತಿ ಸಾಮರಸ್ಯ ವಾತಾವರಣ ಕೆಡಿಸಿ ಬಿಜೆಪಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಸಂಚು ಇದಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಕಾಪು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಈ ಕೃತ್ಯ ಎಸಗಿದವರ ಹಿಂದೆ ಇರುವ ಸಂಘಟನೆ, ವ್ಯಕ್ತಿಗಳ ಮೇಲೂ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಶಾಸಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next