Advertisement

ಮಂಗಳೂರು : ಮತ್ತೆ ನಾಗ ಬನಕ್ಕೆ ಹಾನಿ, ಪೊಲೀಸರಿಂದ ಪರಿಶೀಲನೆ

01:02 PM Nov 13, 2021 | Team Udayavani |

ಮಂಗಳೂರು : ನಗರದ ಕೋಡಿಕಲ್ ನಲ್ಲಿ ನಾಗ ಬನಕ್ಕೆ ಹಾನಿ ಮಾಡಿದ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ಸ್ಥಳದಲ್ಲಿ ಜನ ಜಮಾಯಿಸಿದ್ದು, ಉರ್ವ ಪೊಲಿಸರು ಸ್ಥಳದಲ್ಲಿ ನಿಗಾವಹಿಸುತ್ತಿದ್ದಾರೆ

ನಾಗನ ಕಟ್ಟೆಯಿಂದ ಒಂದು ಕಲ್ಲನ್ನು ಬಿಸಾಡಿರುವುದು ಕಂಡುಬಂದಿದೆ.

ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಕೆಲ ದಿನಗಳ ಹಿಂದೆ ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಕೂಳೂರಿನ ನಾಗನ ಕಟ್ಟೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದರು.
ಸ್ಥಳದಲ್ಲಿ ಪಿಕ್ಕಾಸು, ಕತ್ತಿ ಮೊದಲಾದ ಪರಿಕರಗಳು ಪತ್ತೆಯಾಗಿದ್ದವು. 19 ನಾಗನ ಕಲ್ಲಿನ ಪೈಕಿ 6 ನಾಪತ್ತೆಯಾಗಿದ್ದವು, ಒಂದನ್ನು ಪುಡಿ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next