Advertisement

ಮಂಗಳೂರು ಸಂಸದ ಚೆಪ್ಪುಡೀರ ಮುತ್ತಣ್ಣ ಕೊಡಗಿನ ಸಿಎಂ ಆಗಿದ್ದರು !

05:51 PM Apr 03, 2023 | Team Udayavani |

ಮಂಗಳೂರು: 1967ರಲ್ಲಿ ಮಂಗಳೂರಿನ ಸಂಸದರಾಗಿದ್ದ ಚೆಪ್ಪುಡೀರ ಮುತ್ತಣ್ಣ ಪೂಣಚ್ಚ (ಸಿ.ಎಂ. ಪೂಣಚ್ಚ) ಕೊಡಗಿನ ಸಿಎಂ ಆಗಿಯೂ ಕಾರ್ಯನಿರ್ವಹಿಸಿದ್ದರು!

Advertisement

1951ರಲ್ಲಿ ಕೊಡಗು ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಸಿ.ಎಂ. ಪೂಣಚ್ಚ ಅವರು ಗೆದ್ದು ಮುಖ್ಯ ಮಂತ್ರಿಯಾದರು. 1956ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾದಾಗ ಪುಟ್ಟ ರಾಜ್ಯ ಕೊಡಗು ಜಿಲ್ಲೆಯಾಗಿ ಮೈಸೂರು ರಾಜ್ಯದಲ್ಲಿ ವಿಲೀನವಾಯಿತು.

1952ರಿಂದ 56ರ ವರೆಗೆ ನಿಜಲಿಂಗಪ್ಪ ಸರಕಾರದಲ್ಲಿ ಗೃಹ ಹಾಗೂ ಕೈಗಾರಿಕಾ ಸಚಿವರಾಗಿ, 1961ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಲಾಲ್‌ಬಹಾದೂರ್‌ ಶಾಸ್ತ್ರಿ ಸರಕಾರದಲ್ಲಿ ಹಣಕಾಸು ಸಹಾಯಕ ಸಚಿವ ಹಾಗೂ ಇಂದಿರಾ ಸರಕಾರದಲ್ಲಿ ವಿಮಾನಯಾನ ಸಹಾಯಕ ಸಚಿವರಾಗಿದ್ದರು.

ಅಂದಹಾಗೆ, 1967ರಲ್ಲಿ ಮಂಗಳೂರು ಸಂಸದರಾದ ಅವರು ಕೇಂದ್ರ ರೈಲ್ವೇ ಸಚಿವರಾಗಿದ್ದರು. ಕಾಂಗ್ರೆಸ್‌ ಇಬ್ಭಾಗವಾದಾಗ ಸಂಸ್ಥಾ ಕಾಂಗ್ರೆಸ್‌ನಲ್ಲಿ ಉಳಿದ ಪೂಣಚ್ಚ 1971ರ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ 1978-80ರ ವರೆಗೆ ಮಧ್ಯ ಪ್ರದೇಶ, 1980- 83ರವರೆಗೆ ಒರಿಸ್ಸಾದ ರಾಜ್ಯಪಾಲರಾಗಿಯೂ ಅವರು ಸೇವೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next