Advertisement

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಗಾಂಜಾ ಬಳಕೆ ತಡೆಗೆ ಕ್ರಮ: ಅಲೋಕ್ ಕುಮಾರ್

01:38 PM Mar 02, 2021 | Team Udayavani |

ಮಂಗಳೂರು: ಮಂಗಳೂರು ಜೈಲು ಮೇಲ್ದರ್ಜೆಗೇರಿಸಿ ಇನ್ನೂ ಹೆಚ್ಚು ಭದ್ರತೆಯ ಜೈಲನ್ನಾಗಿ ಪರಿವರ್ತಿಸಲಾಗುತ್ತದೆ. ಬಂಟ್ವಾಳ ಮುಡಿಪುವಿನಲ್ಲಿ ಹೊಸ ಸೆಂಟ್ರಲ್ ಜೈಲು ಕಾಮಗಾರಿ ನಡೆಯುತ್ತಿದ್ದು ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಅದು ಒಂದು ಸಾವಿರ ಖೈದಿಗಳ ಸಾಮರ್ಥ್ಯ ಹೊಂದುತ್ತದೆ ಎಂದು ಬಂಧೀಖಾನೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

Advertisement

ಕೋವಿಡ್ ಇನ್ನೂ ಪೂರ್ಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಖೈದಿಗಳ ಸಂಬಂಧಿಕರ ನೇರ ಸಂದರ್ಶನಕ್ಕೆ ಅವಕಾಶ ಇಲ್ಲ. ಪೋನ್, ಇ-ಮುಲಾಖಾತ್ ಮೂಲಕ ಸಂದರ್ಶನಕ್ಕೆ ಅವಕಾಶ ನೀಡಲಾಗಿದೆ.

ಮಂಗಳೂರು ಜೈಲಿನಲ್ಲಿ ಮೊಬೈಲ್, ಗಾಂಜಾ ಬಳಕೆ ತಡೆಗೆ ಕ್ರಮ ಕೈಗೊಳ್ಳಲಾಗಿದ್ದು ಈಗ ಅಂತಹ ದೂರುಗಳಿಲ್ಲ ಎಂದು ಮಂಗಳೂರಿನಲ್ಲಿ ಬಂಧೀಖಾನೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:  ಕಾರ್ಮಿಕರ ಜೊತೆ ಚಹಾ ಎಲೆ ಬಿಡಿಸಿದ ಪ್ರಿಯಾಂಕಾ : ವಿಡಿಯೋ ನೋಡಿ!

Advertisement

Udayavani is now on Telegram. Click here to join our channel and stay updated with the latest news.

Next