Advertisement

ಮಂಗಳೂರು: ಇನ್‌ಸ್ಪೆಕ್ಟರ್‌ಗಳು ಮತ್ತೆ ಹಿಂದಿನ ಠಾಣೆಗೆ ವರ್ಗ

12:08 AM Jun 04, 2023 | Team Udayavani |

ಮಂಗಳೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್‌ ಕಮಿಷನರೆಟ್‌ ಮತ್ತು ದ.ಕ. ಎಸ್ಪಿ ವ್ಯಾಪ್ತಿಯಲ್ಲಿ ವರ್ಗಾವಣೆ ಮಾಡಲಾದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ಮತ್ತೆ ಅವರ ಹಿಂದಿನ ಠಾಣೆಗೆ ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಮಾಡಿದೆ.

Advertisement

ಮಂಗಳೂರು ಪೂರ್ವ ಸಂಚಾರ ಠಾಣೆ: ಗೋಪಾಲಕೃಷ್ಣ ಭಟ್‌, ಸುಳ್ಯ ವೃತ್ತ: ನವೀನ್‌ ಚಂದ್ರಜೋಗಿ, ದ.ಕ. ಮಹಿಳಾ ಪೊಲೀಸ್‌ ಠಾಣೆ: ಮಧುಸೂದನ್‌ ಎನ್‌. ರಾವ್‌, ಕೊಣಾಜೆ ಠಾಣೆ: ಪ್ರಕಾಶ್‌ ದೇವಾಡಿಗ, ಮಂಗಳೂರು ನಗರ ಸೆನ್‌ ಪೊಲೀಸ್‌ ಠಾಣೆ: ಸತೀಶ ಎಂ.ಪಿ., ನಗರ ಎಸ್‌ ಬಿ: ಮಹಮ್ಮದ್‌ ಷರೀಫ್‌, ಕಂಕನಾಡಿ ನಗರ ಠಾಣೆ: ಭಜಂತ್ರಿ ಎಸ್‌., ದ.ಕ. ಸೆನ್‌ ಪೊಲೀಸ್‌ ಠಾಣೆ: ಸವಿತ್ರತೇಜ, ಸಿಸಿಆರ್‌ಬಿ ಮಂಗಳೂರು ನಗರ: ಗುರುದತ್ತ ಕಾಮತ್‌, ನಗರ ಮಹಿಳಾ ಪೊಲೀಸ್‌ ಠಾಣೆ: ಲೋಕೇಶ್‌ ಎ.ಸಿ., ಮಂಗಳೂರು ನಗರ ಗ್ರಾಮಾಂತರ: ಜಾನ್ಸನ್‌ ಕಿರಣ್‌ ಡಿ’ಸೋಜಾ ಅವರನ್ನು ವರ್ಗಾವಣೆಗೊಳಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next