Advertisement

ಗುರುಪುರ: ಟಿಪ್ಪರ್-ಲಾರಿ ಢಿಕ್ಕಿ; ಟಿಪ್ಪರ್‌ ಚಾಲಕ ಮೃತ್ಯು, ಲಾರಿ ಚಾಲಕ ಗಂಭೀರ

03:23 PM Dec 05, 2022 | Team Udayavani |

ಬಜ್ಪೆ: ಟಿಪ್ಪರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಟಿಪ್ಪರ್ ಚಾಲಕ ಮೃತಪಟ್ಟ ಘಟನೆ ರಾ.ಹೆ. 169 ರ ಗುರುಪುರದ ಬೆಳ್ಳಿಬೆಟ್ಟು ಇಳಿಜಾರಿನಲ್ಲಿ ಸೋಮವಾರ ಮುಂಜಾನೆ (ಡಿ.5) ಸಂಭವಿಸಿದೆ.

Advertisement

ಅಪಘಾತದ ಪರಿಣಾಮ ಟಿಪ್ಪರ್‌ ಮಾಲಕ ಹಾಗೂ ಚಾಲಕ ಕಾವೂರು ಮೂಲದ ಕೊಂಚಾಡಿ ನಿವಾಸಿ ಲೋಕನಾಥ್‌ ಶೆಟ್ಟಿಗಾರ್(‌62)  ಮೃತಪಟ್ಟಿದ್ದಾರೆ. ಲಾರಿ ಚಾಲಕ ಆಂಧ್ರಪ್ರದೇಶ ಮೂಲದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಡಬಿದ್ರೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಲಾರಿ ಕೈಕಂಬ-ಗುರುಪುರ ಕಡೆಗೆ ಹೋಗುತ್ತಿದ್ದ ಟಿಪ್ಪರ್‌ ನಡುವೆ ಅಪಘಾತ ನಡೆದಿದೆ. ಈ ವೇಳೆ ಗುರುಪುರದ ಬೆಳ್ಳಿಬೆಟ್ಟು ಇಳಿಜಾರು ಎಂಬಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ್ದು, ಘಟನಾ ಸ್ಥಳಕ್ಕೆ ಸ್ಥಳೀಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾ.ಹೆ. ಮಾರ್ಗ ತಡೆದು ಕ್ರೇನ್‌ ಮೂಲಕ ಟಿಪ್ಪರ್‌ ಹಾಗೂ ಲಾರಿಯನ್ನು ಸ್ಥಲಾಂತರಿಸಲಾಗುತ್ತಿದೆ.  ಬದಲಿ ಮಾರ್ಗವಾಗಿ ವಾಹನಗಳು ಬಂಗ್ಲೆಗುಡ್ಡೆ-ಬಂಡಸಾಲೆ ಮೂಲಕ ಸಾಗುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next