Advertisement

ಪ್ರಯಾಣಿಕರ ಕೊರತೆ ಹಿನ್ನೆಲೆ: ಮಂಗಳೂರು –ಹುಬ್ಬಳ್ಳಿ ವಿಮಾನ ಸೇವೆ ಸ್ಥಗಿತ

12:55 AM Mar 04, 2023 | Team Udayavani |

ಮಂಗಳೂರು: ಕಳೆದ ವರ್ಷದ ಮೇ ತಿಂಗಳಿನಲ್ಲಿ ಪ್ರಾರಂಭಗೊಂಡಿದ್ದ ಮಂಗಳೂರು -ಹುಬ್ಬಳ್ಳಿ ವಿಮಾನಯಾನವು ಇದೇ ತಿಂಗಳು ಸ್ಥಗಿತಗೊಳ್ಳಲಿದೆ.

Advertisement

ಏರ್‌ ಇಂಡಿಗೋದವರು ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಮಾ. 12ರಂದು ಸೇವೆ ಕೊನೆಗೊಳಿಸಲು ನಿರ್ಧರಿಸಿದ್ದಾರೆ.

ರಾಜ್ಯದ ಪ್ರಮುಖ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಮಂಗಳೂರು ಮಧ್ಯೆ ಸೋಮ, ಬುಧ, ಶುಕ್ರವಾರಗಳಂದು ವಿಮಾನ ಹಾರಾಟವಿತ್ತು.

ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರ ಬೇಡಿಕೆ ಕಂಡುಬರಲಿಲ್ಲ,ಹಾಗಾಗಿ ಈ ವಿಮಾನ ಹಾರಾಟ ನಿಲ್ಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚು ಬೇಡಿಕೆ ಇರುವ ಹುಬ್ಬಳ್ಳಿ -ಪೂನಾ ಮಾರ್ಗಕ್ಕೆ ಆದ್ಯತೆ ನೀಡಲಿರುವುದಾಗಿ ತಿಳಿದುಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next