Advertisement

ಮಂಗಳೂರು: ಇಂದಿನಿಂದ ಸರ್ವಿಸ್ ಬಸ್ ನಿಲ್ದಾಣದಲ್ಲೇ ಸಿಟಿ ಬಸ್ ನಿಲುಗಡೆ

12:54 PM Apr 01, 2023 | Team Udayavani |

ಮಂಗಳೂರು: ಮಂಗಳೂರಿನ ಸಿಟಿ ಬಸ್ ಪ್ರಯಾಣಿಕರು ಗಮನಿಸಿ… ಇಂದು ಎ.1 ರಿಂದ ಸ್ಟೇಟ್ ಬ್ಯಾಂಕ್ ಸಿಟಿ ‌ಬಸ್ ನಿಲ್ದಾಣಕ್ಕೆ ಬಸ್ ಗಳು ಬರುವುದಿಲ್ಲ, ಬದಲಾಗಿ ಪಕ್ಕದ ಸರ್ವಿಸ್ ಬಸ್ ನಿಲ್ದಾಣದಿಂದಲೇ ಹೊರಡಲಿವೆ.

Advertisement

ಈ‌‌ ಹಿಂದಿನ‌ ಸಿಟಿ ಬಸ್ ನಿಲ್ದಾಣ ಬಳಿ ವಾಹನಗಳ ಸುಗಮ ಸಂಚಾರ ಹಿನ್ನಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದು ಶನಿವಾರ ಜಾರಿಗೊಂಡಿದೆ.

ಖಾಸಗಿ ವಾಹನ ಸಂಚಾರದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಇದೇ ವೇಳೆ ಪೊಲೀಸ್ ಆಯುಕ್ತರ ಕಚೇರಿ ಎದುರಿನ‌ ರಸ್ತೆಯಿಂದ (ಸರ್ವಿಸ್ ಬಸ್ ನಿಲ್ದಾಣ ಪಕ್ಕ) ಬಸ್ ಹೊರತುಪಡಿಸಿ ಇತರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮೊದಲ‌‌ ದಿನ ಗೊಂದಲ: ಪೊಲೀಸರ ಕ್ರಮದಿಂದ ಮೊದಲ‌‌ ದಿನ ಪ್ರಯಾಣಿಕರು, ವಾಹನ ಚಾಲಕರಲ್ಲಿ ಗೊಂದಲ ಉಂಟಾಗಿದ್ದು ಪೊಲೀಸರು ಸ್ಥಳದಲ್ಲಿದ್ದು ಸೂಚನೆ ನೀಡುತ್ತಿದ್ದಾರೆ. ಪೊಲೀಸರ ಕ್ರಮಕ್ಕೆ ಪೂರ್ಣ ಸಹಕಾರ ನೀಡುತ್ತಿರುವುದಾಗಿ ಬಸ್ ಮಾಲಕರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next