Advertisement

ಮಂಗಳೂರು: ಕ್ರಿಸ್ಮಸ್‌ ಸಂಭ್ರಮಾಚರಣೆಗೆ ಚಾಲನೆ

12:29 AM Dec 24, 2022 | Team Udayavani |

ಮಂಗಳೂರು: ಕ್ರಿಸ್ಮಸ್‌ ಸಂಭ್ರ ಮಾಚರಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರು ನಗರವೂ ಸಜ್ಜಾಗುತ್ತಿದೆ. ಶುಕ್ರವಾರ ನಗರದಲ್ಲಿರುವ ಬಿಷಪ್‌ ಹೌಸ್‌ನಲ್ಲಿ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾಕೇಕ್‌ ಕತ್ತರಿಸುವ ಮೂಲಕ ಸಂಭ್ರಮಾಚರಣೆಗೆ ಚಾಲನೆ ನೀಡಿದರು.

Advertisement

ಬಿಷಪ್‌ ಅವರು ತಮ್ಮ ಸಂದೇಶದಲ್ಲಿ, ಈಗ ಮತ್ತೆ ಕೊರೊನಾ ಹರಡುತ್ತಿರುವ ಕಾರಣ ಸರಕಾರದ ನಿಯಮಗಳ ಪಾಲನೆಯೊಂದಿಗೆ ಹಬ್ಬವನ್ನು ಆಚರಿಸೋಣ ಎಂದರು.

ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಜೆ.ಬಿ. ಸಲ್ದಾನ್ಹ, ರಾಯ್‌ ಕ್ಯಾಸ್ತಲಿನೊ, ಪಾಲನ ಸಮಿತಿಯ ಕಾರ್ಯದರ್ಶಿ ಡಾ| ಜಾನ್‌ ಡಿ’ಸಿಲ್ವಾ, ಮಾಧ್ಯಮ ಸಂಯೋಜಕ ಎಲಿಯಾಸ್‌ ಫೆರ್ನಾಂಡಿಸ್‌, ಕೆನರಾ ಕಮ್ಯುನಿ ಕೇಶನ್‌ನ ಸೆಂಟರ್‌ನ ನಿರ್ದೇಶಕ ವಂ| ಅನಿಲ್‌ ಐವನ್‌ ಫೆರ್ನಾಂಡಿಸ್‌, ಎಸ್ಟೇಟ್‌ ಮ್ಯಾನೇಜರ್‌ ವಂ| ಮ್ಯಾಕ್ಸಿಂ ರೊಜಾರಿಯೊ, ಬಿಷಪ್‌ ಅವರ ಕಾರ್ಯದರ್ಶಿ ವಂ| ತ್ರಿಷಾನ್‌ ಡಿ’ಸೋಜಾ, ಫಾ| ವೆಲೇರಿಯನ್‌ ಫೆರ್ನಾಂಡಿಸ್‌, ವಂ| ರೂಪೇಶ್‌ ಮಾಡ್ತ, ಸುಶೀಲ್‌ ನೊರೊನ್ಹಾ ಮೊದ ಲಾದವರು ಉಪಸ್ಥಿತರಿದ್ದರು.

ಬಿಷಪ್‌ ಅವರು ಡಿ. 24ರಂದು ರಾತ್ರಿ 7.30ಕ್ಕೆ ಮಂಗಳೂರು ರೊಸಾರಿಯೊದ ಅವರ್‌ ಲೇಡಿ ಆಫ್ ಹೋಲಿ ರೋಸರಿ ಕೆಥೆಡ್ರಲ್‌ನಲ್ಲಿ ಸಾಮೂಹಿಕ ಕ್ರಿಸ್ಮಸ್‌ ಸಂಭ್ರಮಾಚರಣೆಯಲ್ಲಿ (ಕ್ರಿಸ್ಮಸ್‌ ಈವ್‌ ಮಾಸ್‌) ಪಾಲ್ಗೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next