Advertisement

ಮಂಗಳೂರು: ವಿದ್ಯಾರ್ಥಿಗೆ ಹಲ್ಲೆ: ಮೂವರ ಬಂಧನ

12:37 AM Nov 28, 2022 | Team Udayavani |

ಮಂಗಳೂರು: ಬಸ್‌ನಲ್ಲಿ ಸಹಪಾಠಿ ಹಿಂದೂ ಯುವತಿಯೊಂದಿಗೆ ಒಂದೇ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

Advertisement

ಸುರತ್ಕಲ್‌ನ ಮುತ್ತು, ಪ್ರಕಾಶ್‌ ಮತ್ತು ಅಸೈಗೋಳಿಯ ರಾಕೇಶ್‌ ಬಂಧಿತರು.

ನ. 24ರಂದು ಸಂಜೆ ಕಾರ್ಕಳ-ನಿಟ್ಟೆ ಮಾರ್ಗವಾಗಿ ಮಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ರಶೀಮ್‌ ಉಮರ್‌ ಯುವತಿ ಜತೆ ಕುಳಿತುಕೊಂಡು ಪ್ರಯಾಣಿಸುತ್ತಿದ್ದಾಗ ನಂತೂರಿನಲ್ಲಿ ಯುವಕರ ತಂಡ ಬಸ್‌ನೊಳಗೆ ನುಗ್ಗಿ ಹಲ್ಲೆ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next