Advertisement

ಮುನಿಶ್ರೀ 108 ವೀರಸಾಗರ ಮಹಾರಾಜರ ಮಂಗಲ ಪ್ರವೇಶ

11:22 AM Apr 16, 2018 | Team Udayavani |

ಮೂಡಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್‌ ವಿದ್ಯಾ ಸಂಸ್ಥೆಗೆ ಮುನಿಶ್ರೀ 108 ವೀರಸಾಗರ ಮಹಾರಾಜರು ಆಗಮಿಸಿದರು. ಎಕ್ಸಲೆಂಟ್‌ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವ ರಾಜ ಜೈನ್‌ ಮತ್ತು ಕಾರ್ಯದರ್ಶಿ ರಶ್ಮಿತಾ ಜೈನ್‌ ಹಾಗೂ ಸಿಬಂದಿ ಸ್ವಾಗತಿಸಿದರು.

Advertisement

ಬಳಿಕ ಆಶೀರ್ವಚನ ನೀಡಿದ ಅವರು ‘ವಿದ್ಯೆ ಕಲಿಸಿದ ಗುರುಗಳು, ಜನ್ಮ ನೀಡಿದ ಹೆತ್ತ ತಂದೆ-ತಾಯಿಗಳ ಋಣ ತೀರಿಸಲು ಅಸಾಧ್ಯ. ಶ್ರದ್ಧಾ ಭಕ್ತಿಯಿಂದ ವಿದ್ಯೆಯನ್ನು ಕಲಿತು ಜೀವನ ಕಲ್ಯಾಣದೊಂದಿಗೆ ಆತ್ಮ ಕಲ್ಯಾಣವನ್ನು ಸಾಧಿಸಬೇಕು ಎಂದರು.

ಎಕ್ಸಲೆಂಟ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಯುವರಾಜ್‌ ಜೈನ್‌ ಮಾತನಾಡಿ, ವೀರಸಾಗರ ಮುನಿ ಮಹಾರಾಜರು ವಿದ್ಯಾರ್ಥಿಗಳಲ್ಲಿ ಸತ್ಸಂಗ, ಧಾರ್ಮಿಕ ಮನೋಭಾವ ಮೂಡಿಸಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆ ಕಂಡಿದ್ದೇವೆ ಎಂದು ತಿಳಿಸಿದರು. ಕಾರ್ಯದರ್ಶಿ ರಶ್ಮಿತಾ ಯುವರಾಜ್‌ ಜೈನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next