Advertisement

ಮಂಡ್ಯ ಸಮ್ಮೇಳನ: ಲಾಂಛನ, ಧ್ಯೇಯವಾಕ್ಯ ರಚಿಸಲು ಅವಕಾಶ

09:27 PM Mar 05, 2023 | Team Udayavani |

ಬೆಂಗಳೂರು: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಮತ್ತು ಧ್ಯೇಯವಾಕ್ಯ ಸಿದ್ಧಪಡಿಸುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಷಿ ಹೇಳಿದ್ದಾರೆ.

Advertisement

ನಾಡು, ನುಡಿ, ಪರಂಪರೆ, ಸಾಹಿತ್ಯ, ಕಲೆ, ಸಂಸ್ಕೃತಿ, ಸಾಧನೆ, ನೆಲ, ಮೂಲಗಳನ್ನು ಸಾರುವ ಮತ್ತು ಇತಿಹಾಸವನ್ನು ಬಿಂಬಿಸಬಲ್ಲ ಅರ್ಥಪೂರ್ಣವಾಗಿ ಕಲಾವಂತಿಕೆಯಿಂದ ಸಿದ್ಧಪಡಿಸಲಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಅಕ್ಷರ ಜಾತ್ರೆಯ ಅಧಿಕೃತ ಲಾಂಛನ ಹಾಗೂ ಧ್ಯೇಯವಾಕ್ಯವಾಗಿ ಬಳಸಲಾಗುವುದು. ಆಯ್ಕೆಯಾದ ಲಾಂಛನ, ಧ್ಯೇಯವಾಕ್ಯ ಕತೃìಗೆ ಸಮ್ಮೇಳನದಲ್ಲಿ ಗೌರವ ಸಲ್ಲಿಸಲಾಗುವುದು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ಅರ್ಥಪೂರ್ಣವಾದ ಲಾಂಛನ ಹಾಗೂ ಧ್ಯೇಯವಾಕ್ಯವನ್ನು ಮೇ 31ರ ಒಳಗೆ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು-18 ಇಲ್ಲಿಗೆ ಕಳುಹಿಸಬಹುದು.

 

Advertisement

Udayavani is now on Telegram. Click here to join our channel and stay updated with the latest news.

Next