Advertisement

ಚಿತಾಗಾರಗಳಲ್ಲಿ ದರಪಟ್ಟಿ ಅಳವಡಿಕೆ ಕಡ್ಡಾಯ

12:08 PM Jan 31, 2017 | Team Udayavani |

ಬೆಂಗಳೂರು: ಚಿತಾಗಾರಗಳು, ಸ್ಮಶಾನ ಹಾಗೂ ಶವ ಸಾಗಣೆ ವಾಹನಗಳ ಬಳಕೆಗೆ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ. ಇದಕ್ಕೆ ನಿರ್ದಿಷ್ಟ ದರ ಇಲ್ಲವಾಗಿದೆ. ಕೆಲ ಸ್ಮಶಾನಗಳಲ್ಲಿ ಸರಿಯಾದ ನಿರ್ವಹಣೆ ಇಲ್ಲ.

Advertisement

ಇದರಿಂದ ಬಡವರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಬಿಜೆಪಿಯ ಎಂ.ಬಿ. ದ್ವಾರಕನಾಥ್‌ ಬಿಬಿಎಂಪಿ ಮಾಸಿಕ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮಂಜುನಾಥ್‌ ಪ್ರಸಾದ್‌, ಸ್ಮಶಾನ ಮತ್ತು ಚಿತಾಗಾರಗಳ ಕಾಯಕಲ್ಪಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.

ಪಾರದರ್ಶಕತೆ ಕಾಪಾಡಲು ಆನ್‌ಲೈನ್‌ ವ್ಯವಸ್ಥೆ ಕೂಡ ಕಲ್ಪಿಲಾಗಿದೆ. ಎಲ್ಲ ಸ್ಮಶಾನಗಳಲ್ಲಿ ದರಪಟ್ಟಿ ಅಳವಡಿಸಲು ಮಂಗಳವಾರ ಆದೇಶ ಹೊರಡಿಸಲಾಗುವುದು ಎಂದು ಹೇಳಿದರು. ಸದಸ್ಯ ಕೃಷ್ಣಮೂರ್ತಿ ಮಾತನಾಡಿ, ಚಿತಾಗಾರಗಳ ಕಾರ್ಯ ನಿರ್ವಹಣೆ ಸಂಜೆ 5ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಒಂದೆರಡು ಗಂಟೆ ವಿಸ್ತರಿಸಿದರೆ ಸೂಕ್ತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next