Advertisement

Kasaragod ಆಸ್ಪತ್ರೆಯಿಂದ ನಾಪತ್ತೆಯಾದಾತ ರೈಲು ಹಳಿಯಲ್ಲಿ ಶವವಾಗಿ ಪತ್ತೆ

06:16 PM Aug 16, 2023 | Team Udayavani |

ಕುಂಬಳೆ: ಕುಂಬಳೆ ರೈಲು ನಿಲ್ದಾಣದ ಬಳಿ ಇತ್ತೀಚೆಗೆ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವ್ಯಕ್ತಿ ಕಾಸರಗೋಡು ಜನರಲ್‌ ಆಸ್ಪತ್ರೆಯಿಂದ ನಾಪತ್ತೆಯಾದ ವ್ಯಕ್ತಿಯೆಂದು ತಿಳಿದು ಬಂದಿದೆ.

Advertisement

ಎಸ್‌.ಐ. ಥೋಮಸ್‌ ನೇತೃತ್ವದ ಪೊಲೀಸರು ಮೃತದೇಹದ ಮಹಜರು ನಡೆಸುವ ಸಂದರ್ಭ ಕೈಯಲ್ಲಿ ಇಂಜೆಕ್ಷನ್‌ ಚುಚ್ಚಲು ಅಳವಡಿಸಿದ ಸಿರಿಂಜ್‌ ಕಂಡುಬಂದಿತ್ತು. ಕಾಸರಗೋಡು ತಳಂಗರೆ ರೈಲು ಹಳಿಯಲ್ಲಿ ಈ ವ್ಯಕ್ತಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಪೊಲೀಸರು ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದಂತೆ ಅಲ್ಲಿಂದ ನಾಪತ್ತೆಯಾಗಿದ್ದ ವ್ಯಕ್ತಿಯೇ ಕುಂಬಳೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ.

ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸುವ ಸಂದರ್ಭದಲ್ಲಿ ಅವರು ತನ್ನ ಹೆಸರು ಚುಂಡನ್‌ ಎಂದು ತಿಳಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next