Advertisement

ಗಡ್ಕರಿಗೆ ಬೆದರಿಕೆ ಪ್ರಕರಣ: ಕೈದಿ ನಾಗ್ಪುರಕ್ಕೆ ಶಿಫ್ಟ್

10:56 PM Mar 28, 2023 | Team Udayavani |

ನಾಗ್ಪುರ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಬೆದರಿಕೆ ಕರೆ ಪ್ರಕರಣ ಸಂಬಂಧ ಕರ್ನಾಟಕದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೊಲೆ ಪ್ರಕರಣದ ಅಪರಾಧಿಯನ್ನು ಮುಂಬೈ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದಾರೆ.

Advertisement

ಅಪರಾಧಿ ಜಯೇಶ್‌ ಪೂಜಾರಿ ಜ.11ರಂದು ಗಡ್ಕರಿ ಕಚೇರಿಗೆ ಕರೆ ಮಾಡಿ, 100 ಕೋಟಿ ರೂ. ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಮತ್ತೆ ಮಾ.21ರಂದು 10 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದ. ಪದೇ ಪದೆ ಬೆದರಿಕೆ ಕರೆ ಮಾಡುತ್ತಿರುವ ಆತನ ಉದ್ದೇಶವೇನು, ಅದರ ಹಿಂದಿರುವವರು ಯಾರು ಎಂಬುದನ್ನು ತನಿಖೆ ನಡೆಸಲು ಮುಂಬೈ ಪೊಲೀಸರು ಜಯೇಶ್‌ನನ್ನು ವಶಕ್ಕೆ ಪಡೆದು, ವಿಮಾನದ ಮೂಲಕ ನಾಗ್ಪುರಕ್ಕೆ ಕರೆದೊಯ್ದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next