Advertisement

4 ಲಕ್ಷ ರೂ. ಮೊಟ್ಟೆ ಸಾಗಿಸುತ್ತಿದ್ದ ಟ್ರಕ್‌ ಅಪಹರಣ: ವ್ಯಕ್ತಿ ಸೆರೆ

12:29 PM Nov 23, 2018 | Team Udayavani |

ಥಾಣೆ : ತೆಲಂಗಾಣದ ಹೈದರಾಬಾದ್‌ ನಿಂದ ಮಹಾರಾಷ್ಟ್ರದ ಅಂಬರ್‌ನಾಥ್‌ ಗೆ ಲಕ್ಷಕ್ಕೂ ಅಧಿಕ ಮೊಟ್ಟೆಗಳನ್ನು ಸಾಗಿಸುತ್ತಿದ್ದ ಟ್ರಕ್‌ ಅಪಹರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಕಳೆದ ನ.18ರಂದು ನಡೆದಿದ್ದ ಈ ಘಟನೆಯ ಆರೋಪಿಯನ್ನು ಸಾದಾತ್‌ ಎಂದು ಗುರುತಿಸಲಾಗಿದೆ. ಟ್ರಕ್ಕಿನ ಚಾಲಕ ಮತ್ತು ಆತನ ಮಗನನ್ನು ಅಪಹರಿಸಿದ್ದ ಸಾದಾತ್‌ ತನ್ನ ಮೂವರು ಸಹಚರರೊಂದಿಗೆ ಟ್ರಕ್‌ ಸಹಿತ ಪರಾರಿಯಾಗಿದ್ದ ಎಂದು ಡೆಪ್ಯುಟಿ ಪೊಲೀಸ್‌ ಕಮಿಷನರ್‌ ದೀಪಕ್‌ ದೇವರಾಜ್‌ ತಿಳಿಸಿದ್ದಾರೆ. ಆರೋಪಿಗಳು ಟ್ರಕ್‌ ಚಾಲಕ ಮತ್ತು ಆತನ ಮಗನನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಮುಂದಕ್ಕೆ ಹೋಗಿದ್ದರು. 

ಸಾದಾತ್‌ ನನ್ನು ಭಿನ್‌ವಾಡಿ ಪಟ್ಟಣದ ಮಹಾಪೋಲಿ ಎಂಬಲ್ಲಿ ಬಂಧಿಸಲಾಯಿತು. ಆತನ ಜತೆಗಿದ್ದ ಇತರ ಮೂವರಿಗಾಗಿ ಈಗ ಶೋಧ ಕಾರ್ಯ ನಡೆದಿದೆ.  ಟ್ರಕ್‌ ನಲ್ಲಿ 4.12 ಲಕ್ಷ ರೂ. ಮೌಲ್ಯದ ಮೊಟ್ಟೆಗಳಿದ್ದವು. ಟ್ರಕ್‌ ಮತ್ತು ಕೃತ್ಯಕ್ಕೆ ಬಳಸಲಾದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next