Advertisement

ಹರಕೆ ತೀರಿಸಲು ಪಶುಪತಿನಾಥನ ದರ್ಶನಕ್ಕೆಂದು ಹೊರಟಿದ್ದಾತ ವಿಮಾನ ಪತನದಲ್ಲಿ ಕೊನೆಯುಸಿರು

11:24 AM Jan 16, 2023 | Team Udayavani |

ಹೊಸದಿಲ್ಲಿ: ನೇಪಾಳದಲ್ಲಿ ಭಾನುವಾರ ವಿಮಾನ ಪತನದಲ್ಲಿ ಸಾವನ್ನಪ್ಪಿದ ಐವರು ಭಾರತೀಯರಲ್ಲಿ ಒಬ್ಬರಾದ ಉತ್ತರ ಪ್ರದೇಶದ ಸೋನಯ ಜೈಸ್ವಾಲ್ ಅವರು ಪ್ರಸಿದ್ಧ ಪಶುಪತಿನಾಥ ದೇವಸ್ಥಾನಕ್ಕೆಂದು ಹೊರಟಿದ್ದರು ಎಂದು ವರದಿಯಾಗಿದೆ.

Advertisement

ಮದ್ಯದಂಗಡಿ ಮಾಲೀಕರಾದ ಮೂವತ್ತೈದು ವರ್ಷದ ಸೋನು ಜೈಸ್ವಾಲ್ ಅವರು ಮಗನ ಹರಕೆ ತೀರಿಸಲು ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಪೂಜೆ ಸಲ್ಲಿಸಲು ತೆರಳಿದ್ದರು. ಸುಮಾರು ಆರು ತಿಂಗಳ ಹಿಂದೆ ಮಗನ ಕುರಿತಾದ ಬಯಕೆಯೊಂದು ನೆರವೇರಿತ್ತು. ಹೀಗಾಗಿ ಪಶುಪತಿನಾಥನ ದರ್ಶನಕ್ಕೆ ಹೊರಟಿದ್ದರು ಎಂದು ಅವರ ಸಂಬಂಧಿ ಹೇಳಿದರು.

ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಚಕ್ ಜೈನಬ್ ಗ್ರಾಮಕ್ಕೆ ಜೈಸ್ವಾಲ್ ಮತ್ತು ಆತನ ಜೊತೆಗಿದ್ದ ಮೂವರು ಗೆಳೆಯರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಘಾತಕ್ಕೊಳಗಾದ ಗ್ರಾಮಸ್ಥರು ಅವರ ಮನೆಯಲ್ಲಿ ಜಮಾಯಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರು: ಕೆಪಿಸಿಸಿ ಕಿಸಾನ್ ಸೆಲ್ ರಾಜ್ಯ ಸಂಚಾಲಕನ ಮನೆಗೆ ಐ.ಟಿ. ದಾಳಿ‌

ಜೈಸ್ವಾಲ್‌ ಗೆ ಇಬ್ಬರು ಪುತ್ರಿಯರಿದ್ದು, ಪುತ್ರನಿದ್ದಲ್ಲಿ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹರಕೆ ಹೊತ್ತಿದ್ದರು ಎಂದು ಅವರ ಸಂಬಂಧಿ ಮತ್ತು ಚಕ್ ಜೈನಬ್ ಗ್ರಾಮದ ಮುಖ್ಯಸ್ಥ ವಿಜಯ್ ಜೈಸ್ವಾಲ್ ಪಿಟಿಐಗೆ ತಿಳಿಸಿದ್ದಾರೆ.

Advertisement

“ಸೋನು, ತನ್ನ ಮೂವರು ಸ್ನೇಹಿತರೊಂದಿಗೆ ಜನವರಿ 10 ರಂದು ನೇಪಾಳಕ್ಕೆ ಹೋಗಿದ್ದರು. ಈಗ ಮಗನನ್ನು ಹೊಂದುವ ಅವರ ಆಸೆ ಈಡೇರಿದ ಕಾರಣ ಭಗವಾನ್ ಪಶುಪತಿನಾಥನಿಗೆ ಪೂಜೆ ಸಲ್ಲಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು. ಆದರೆ ವಿಧಿಯು ಬೇರೆಯದಾಗಿತ್ತು” ಎಂದು ಭಾವುಕರಾಗಿ ವಿಜಯ್ ಜೈಸ್ವಾಲ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next