Advertisement

Karnataka High Court ಆವರಣದಲ್ಲೇ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

04:00 PM Apr 03, 2024 | Team Udayavani |

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಆವರಣದಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಕತ್ತು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ನ್ಯಾಯಾಲಯದ ಆವರಣದಲ್ಲಿದ್ದ ಭದ್ರತಾ ಸಿಬಂದಿ ಕೂಡಲೇ ವ್ಯಕ್ತಿಯನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಯಾವ ಕಾರಣಕ್ಕಾಗಿ ಕಠಿನ ನಿರ್ಧಾರ ತೆಗೆದುಕೊಂಡರು ಎಂದು ನಮಗೆ ತಿಳಿದಿಲ್ಲ. ಕೋರ್ಟ್ ಹಾಲ್ ನಂಬರ್ ಒಂದಕ್ಕೆ ನುಗ್ಗಿ ಚಾಕುವಿನಿಂದ ಕತ್ತು ಸೀಳಿಕೊಂಡಿದ್ದಾನೆ. ಒಳಗೆ ನಿಯೋಜಿಸಲಾಗಿದ್ದ ನಮ್ಮ ಭದ್ರತಾ ಸಿಬಂದಿ ಇದನ್ನು ನೋಡಿ ತತ್ ಕ್ಷಣ ಆತನನ್ನು ರಕ್ಷಿಸಿದ್ದಾರೆ. ”ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

ಘಟನಾ ಸ್ಥಳದಲ್ಲಿ ಯಾವುದೇ ಪತ್ರ ಪತ್ತೆಯಾಗಿಲ್ಲ. ವ್ಯಕ್ತಿಯ ಕುರಿತು ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಆತ್ಮಹತ್ಯೆ ತಡೆಯಬಹುದಾಗಿದೆ. ನೀವು ಅಂತಹ ಆಲೋಚನೆಗಳನ್ನು ಹೊಂದಿದ್ದರೆ, ಸಂಪರ್ಕಿಸಿ ಅಥವಾ ತಜ್ಞರ ಸಹಾಯವನ್ನು ಪಡೆಯಿರಿ.

Advertisement

ಕರ್ನಾಟಕ ಆರೋಗ್ಯ ಸಹಾಯವಾಣಿ – 104
ಸುಶೆಗ್ ಚಾರಿಟೇಬಲ್ ಟ್ರಸ್ಟ್ – 7338201234

Advertisement

Udayavani is now on Telegram. Click here to join our channel and stay updated with the latest news.

Next