Advertisement

Car; ಇದೆಂತಹಾ ಸೇಡು- ತಂದೆ ಮೇಲಿನ ದ್ವೇಷಕ್ಕೆ ಮೂವರು ಮಕ್ಕಳ ಮೇಲೆ ಕಾರು ಹತ್ತಿಸಲು ಯತ್ನ!

11:50 AM Jul 19, 2023 | Team Udayavani |

ಲಕ್ನೋ: ಮಕ್ಕಳ ತಂದೆಯ ಮೇಲಿನ ದ್ವೇಷಕ್ಕೆ ಪ್ರತೀಕಾರವಾಗಿ ಮೂವರು ಮಕ್ಕಳಿಗೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಉತ್ತರಪ್ರದೇಶದ ಲಕ್ನೋದ ಮಲಿಹಾಬಾದ್‌ ನಲ್ಲಿ ನಡೆದಿದ್ದು, ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement

ಇದನ್ನೂ ಓದಿ:ಕಾಪು: ಗಾಯಗೊಂಡು ರಾತ್ರೋ ರಾತ್ರಿ ಮನೆಯೊಳಗೆ ಪ್ರತ್ಯಕ್ಷವಾದ ಕೋತಿ

ಘಟನೆಯಲ್ಲಿ ಮೂವರು ಮಕ್ಕಳು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ. ತಂದೆ ಮೇಲಿನ ದ್ವೇಷಕ್ಕೆ ಆತನ ಮೂವರು ಮಕ್ಕಳ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಪ್ರಕರಣದಲ್ಲಿ ಶಿವಾನಿ (8ವರ್ಷ), ಸ್ನೇಹಾ (4ವರ್ಷ) ಮತ್ತು ಕೃಷ್ಣ (3 ವರ್ಷ) ಗಾಯಗೊಂಡಿದ್ದಾರೆ. ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಗೋವಿಂದ್‌ ಯಾದವ್‌ ಎಂಬಾತನನ್ನು ಸ್ಥಳೀಯರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೊಟ್ವಾಲಿಯ ಸಿಂಧರ್‌ ವಾದ ಕಾಜಿ ಖೇಡಾ ಗ್ರಾಮದ ನಿವಾಸಿ, ಮಕ್ಕಳ ತಂದೆ ವೀರೇಂದ್ರ ಅಲಿಯಾಸ್‌ ಸೀತಾರಾಮ್‌ ಜೊತೆ ಆರೋಪಿ ಗೋವಿಂದ ಯಾದವ್‌ ಗೆ ವೈಯಕ್ತಿಕ ದ್ವೇಷ ಹೊಂದಿದ್ದು, ಇದಕ್ಕೆ ಪ್ರತೀಕಾರವಾಗಿ ಗೋವಿಂದ್‌ ಮಕ್ಕಳನ್ನು ಕೊಲೆ ಮಾಡಲು ಯತ್ನಿಸಿದ್ದ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next