Advertisement

ವೃದ್ಧನಿಗೆ ಚಪ್ಪಲಿಯಿಂದ ಹೊಡೆದು ಎಂಜಲು ನೆಕ್ಕಿಸಿದರು!

02:00 PM Oct 20, 2017 | Team Udayavani |

ಪಾಟ್ನಾ : ಅಮಾನವೀಯ ಘಟನೆಯೊಂದರಲ್ಲಿ ವೃದ್ಧನೊಬ್ಬ ಬಾಗಿಲು ತಟ್ಟದೇ ಗ್ರಾಮ ಪಂಚಾಯತ್‌ ಅಧ್ಯಕ್ಷನ ಮನೆಯೊಳಗೆ ಪ್ರವೇಶ ಮಾಡಿದ್ದಾನೆ ಎಂಬ ಕಾರಣಕ್ಕೆ ಅತ್ಯಂತ ಕೀಳು ಮಟ್ಟದಲ್ಲಿ ಶಿಕ್ಷಿಸಲಾಗಿದೆ. 

Advertisement

ಸರ್ಕಾರಿ ಸೌಲಭ್ಯ ಕೇಳಿಕೊಂಡು ಬಂದ ವೃದ್ಧ  ಮನೆಯೊಳಗೆ ಏಕಾಏಕಿ ಪ್ರವೇಶಿಸಿದ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರು ಚಪ್ಪಲಿಯಲ್ಲಿ  ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾತ್ರವಲ್ಲದೆ ನೆಲಕ್ಕೆ ಬೀಳಿಸಿ ತನ್ನ ಎಂಜಲನ್ನು ತಾನೇ ನೆಕ್ಕುವಂತೆ ಮಾಡಿದ್ದಾರೆ. ಘಟನೆಯ ವಿಡಿಯೋವನ್ನು ಚಿತ್ರೀಕರಿಸಿಕೊಂಡಿದ್ದಾರೆ. 

ಬಿಹಾರ ಮುಖ್ಯಮಂತ್ರಿ ನಿತಿಶ್‌ ಕುಮಾರ್‌ ಅವರ ತವರು ಜಿಲ್ಲೆ ನಳಂದಾದ ಅಜೈಪುರ್‌ನಲ್ಲೇ ಘಟನೆ ನಡೆದಿದೆ. ಘಟನೆಯನ್ನು ಸಚಿವ ನಂದ ಕಿಶೋರ್‌ ಯಾದವ್‌ ಅವರು ಖಂಡಿಸಿದ್ದು , ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next