Advertisement

ದಿಲ್ಲಿ ಪಾರ್ಕ್‌: 25ರ ತರುಣನನ್ನು ಇರಿದು ಕೊಂದ ದುಷ್ಕರ್ಮಿಗಳು

05:06 PM Aug 24, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಹೊರವಲಯದ ಮಂಗೋಲ್‌ಪುರಿಯಲ್ಲಿನ ಪಾರ್ಕ್‌ ಒಂದರಲ್ಲಿ 25 ವರ್ಷ ಪ್ರಾಯದ ತರುಣನೋರ್ವನನ್ನು ನಾಲ್ವರು ಅಪರಿಚಿತ ದುಷ್ಕರ್ಮಿಗಳು ಇರಿದು ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ನಾಲ್ವರು ಅಪರಿಚಿತ ದುಷ್ಕರ್ಮಿಗಳು ತರುಣನನ್ನು ಬೆದರಿಸಿ ಆತನಲ್ಲಿದ್ದ ನಗ-ನಗದನ್ನು ಕಿತ್ತುಕೊಳ್ಳಲು ಮುಂದಾದಾಗ ತರುಣನು ಪ್ರತಿರೋಧ ತೋರಿದ. ಒಡನೆಯೇ ದುಷ್ಕರ್ಮಿಗಳು ತರುಣನನ್ನು ಇರಿದು ಕೊಂದು ಪರಾರಿಯಾದರು. ಮೃತ ತರುಣನನ್ನು ದಿಲ್ಲಿಯ ಬುದ್ಧ ವಿಹಾರ ಒಂದನೇ ಹಂತದ ನಿವಾಸಿ ರಿಂಕು ಡ್ರೈವರ್‌ ಎಂದು ಗುರುತಿಸಲಾಗಿದೆ. 

ವಿನೋದ್‌ ಎಂಬವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ  ಪಾರ್ಕ್‌ ನಲ್ಲಿ  ವಾಕಿಂಗ್‌ ಮಾಡುತ್ತಿದ್ದ ರಿಂಕು ಗೆ ಅಪರಿಚಿತ ದುಷ್ಕರ್ಮಿಗಳು ಇರಿದಿದ್ದಾರೆ ಎಂದು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next