Advertisement

ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

07:14 PM Mar 05, 2023 | Team Udayavani |

ರಬಕವಿ-ಬನಹಟ್ಟಿ : ವ್ಯಕ್ತಿಯೋರ್ವ ಬನಹಟ್ಟಿ ಸಮೀಪದ ಡೆಂಪೋ ಡೇರಿ ಹಿಂಬಾಗದಲ್ಲಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.

Advertisement

34ವರ್ಷದ ಬನಹಟ್ಟಿಯ ಬಸವರಾಜ ರಾಜಶೇಖರ ಚಿಂಚೋರ ಎಂಬಾತನೇ ಮೃತನಾದ ವ್ಯಕ್ತಿಯಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಮಾನಸಿಕ ಅಸ್ವಸ್ಥ ಹಾಗು ಮೂರ್ಛೆ ರೋಗ ಆಗಾಗ್ಗೆ ಬರುತ್ತಿತ್ತೆಂದು ಕುಟುಂಬಸ್ಥರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಶನಿವಾರ ಮಾರ್ಚ್ 4 ರಂದು ಮನೆಯಿಂದ ತೆರಳಿದ ಬಸವರಾಜ ಮರುದಿನ ರವಿವಾರ ಕೃಷ್ಣಾ ನದಿ ಹಿನ್ನೀರಿನಲ್ಲಿ ಈತನ ಶವ ಪತ್ತೆಯಾಗಿದ್ದು, ಪೊಲೀಸರು ಶವವನ್ನು ಹಿನ್ನೀರಿನಿಂದ ಹೊರತೆಗೆದು ತನಿಖೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಮಾನಸಿಕ ಅಸ್ವಸ್ಥ ಹಾಗು ಮೂರ್ಛೆ ರೋಗದಿಂದಲೇ ನೀರಿಗೆ ಬಿದ್ದು ಸಾವನಪ್ಪಿದ್ದಾರೆಂದು ಕುಟುಂಬಸ್ಥರು ದೂರಿನಲ್ಲಿ ಉಲ್ಲೇಖಿಸಿದ್ದು, ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next