Advertisement

‌ವಿಪರೀತ ಕುಡಿತದ ಚಟ; ಕಿಡ್ನಿ ವೈಫಲ್ಯದಿಂದ ಖಿನ್ನತೆಗೊಳಗಾಗಿ ವ್ಯಕ್ತಿ ಆತ್ಮಹತ್ಯೆ

07:40 PM Aug 16, 2022 | Team Udayavani |

ಕುಷ್ಟಗಿ: ಕುಡಿತದ ಚಟದ ದುಷ್ಪರಿಣಾಮ ಕಿಡ್ನಿ ವೈಫಲ್ಯವಾದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣಿಗೆ ಶರಣಾದ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.

Advertisement

ಕುಷ್ಟಗಿ ಪಟ್ಟಣದ ಹಳೆ ಬಜಾರ ನಿವಾಸಿ ಚಂದ್ರಶೇಖರ (46) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಪತಿ ಚಂದ್ರಶೇಖರ ಕುಡಿತದ ಚಟಕ್ಕೆ ಪತ್ನಿ ಗಂಡನ ಮನೆ ತೊರೆದಿದ್ದರಿಂದ ಮಾನಸಿಕ ಖಿನ್ನನಾಗಿ ಕುಡಿತದ ಚಟ ಹೆಚ್ಚು ಮಾಡಿದ್ದ. ಇದರಿಂದ ಕಿಡ್ನಿ ವಿಫಲವಾಗಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹೊಟ್ಟೆ ನೋವು ಸಹಿಸದೇ ಚಂದ್ರಶೇಖರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next