Advertisement

ಕೊಟ್ಟಿಗೆಹಾರ : ಕೆಲಸಕ್ಕೆಂದು ಹೋದ ವ್ಯಕ್ತಿ ನಾಪತ್ತೆ, ಗ್ರಾಮಸ್ಥರು, ಅಧಿಕಾರಿಗಳಿಂದ ಹುಡುಕಾಟ

08:59 PM Nov 29, 2021 | Team Udayavani |

ಕೊಟ್ಟಿಗೆಹಾರ: ಚಾರ್ಮಾಡಿ ಘಾಟ್ ಅರಣ್ಯದ ನಡುವೆ ಇರುವ ಬಿದಿರುತಳ ಗ್ರಾಮದಿಂದ ವ್ಯಕ್ತಿಯೊಬ್ಬರು ನಾಪತ್ತೆಯಾಗಿದ್ದು ಸೋಮವಾರ ಅರಣ್ಯ ಅಧಿಕಾರಿಗಳು, ಪೋಲಿಸರು, ಗ್ರಾಮಸ್ಥರು ಹುಡುಕಾಟ ನಡೆಸಿದರು.

Advertisement

ಬಾಳೂರಿನ ನಾಗೇಶ್ ಆಚಾರ್ (46) ಎಂಬುವವರು ಮನೆ ನಿರ್ಮಾಣ ಕೆಲಸಕ್ಕೆಂದು ಬಿದಿರುತಳ ಗ್ರಾಮಕ್ಕೆ ಕೆಲವು ದಿನಗಳ ಹಿಂದೆ ಹೋಗಿದ್ದು ಶನಿವಾರದಿಂದ ನಾಗೇಶ್ ಆಚಾರ್ ಅವರು ಕಾಣೆಯಾಗಿದ್ದಾರೆ. ಈ ಬಗ್ಗೆ ನಾಗೇಶ್ ಆಚಾರ್ ಅವರ ಪತ್ನಿ ಸುಮ ಬಾಳೂರು ಠಾಣೆಗೆ ದೂರು ನೀಡಿದ್ದು ಸೋಮವಾರ, ಬಾಳೂರು ಪೋಲಿಸರು, ಅರಣ್ಯ ಅಧಿಕಾರಿಗಳು ಹಾಗೂ 150 ಕ್ಕೂ ಹೆಚ್ಚು ಗ್ರಾಮಸ್ಥರು ಸೋಮವಾರ ಸಂಜೆಯವರೆಗೂ ಹುಡುಕಾಟ ನಡೆಸಿದ್ದು ನಾಗೇಶ್ ಅವರು ಪತ್ತೆಯಾಗಿಲ್ಲ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಬಾಳೂರು ಠಾಣೆ ಪಿಎಸ್‌ಐ ರೇಣುಕಾ, ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಕುಣಿಗಲ್: ನೀರಿನಲ್ಲಿ ನಾಲ್ವರು ಕೊಚ್ಚಿಹೋದ ಪ್ರಕರಣ; 2 ಮೃತದೇಹ ಪತ್ತೆ, ಮುಂದುವರಿದ ಶೋಧಕಾರ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next