Advertisement

ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನಾಪತ್ತೆ

08:14 PM Dec 22, 2022 | Team Udayavani |

ಪಡುಬಿದ್ರಿ: ನಡ್ಸಾಲು ಗ್ರಾಮದ ಅಣ್ಣು ಗುರಿಕಾರ ಮನೆ ವಠಾರದ ವಿಶ್ವನಾಥ ಸಾಲ್ಯಾನ್‌ (69) ಅವರು ಡಿ. 21ರಂದು ಪತ್ನಿಯೊಂದಿಗೆ ವೈದ್ಯರ ಕ್ಲಿನಿಕ್‌ ಬಳಿಗೆ ಕಂದು ಬಣ್ಣದ ಕೆಎ20 ಇಎಂ 3346 ಸಂಖ್ಯೆಯ ಸ್ಕೂಟಿಯಲ್ಲಿ ಹೋಗಿ ಪತ್ನಿಯನ್ನು ಇಳಿಸಿ ಅಲ್ಲಿಂದ ನೇರವಾಗಿ ಪಡುಬಿದ್ರಿ ಪೇಟೆಯತ್ತ ಹೋದವರು ಮನೆಗೆ ವಾಪಸಾಗದೆ ನಾಪತ್ತೆಯಾಗಿದ್ದಾರೆ.

Advertisement

ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದು, ಕಿವಿಯೂ ಸರಿಯಾಗಿ ಕೇಳಿಸುತ್ತಿರಲಿಲ್ಲ. ಸಂಜೆಯ ವೇಳೆ ಕಲ್ಲಟ್ಟೆಯ ಪರಿಸರದಲ್ಲಿ ರಮೇಶ್‌ ಪೂಜಾರಿ ಅವರಿಗೆ ಇವರು ಕಾಣಸಿಕ್ಕಿದ್ದರು. ಬಳಿಕ ಎರ್ಮಾಳಿನ ಕೆಲ ಸಿಸಿ ಟಿವಿ ಪರಿಶೀಲನೆಯ ವೇಳೆ ಇವರ ದ್ವಿಚಕ್ರ ವಾಹನವು ಉಡುಪಿಯತ್ತ ತೆರಳುತ್ತಿರುವುದೂ ಪತ್ತೆಯಾಗಿದೆ. ರಾತ್ರಿಯ ವೇಳೆ ಮಲ್ಪೆಯ ಬಡಾನಿಡಿಯೂರು ಸನ್ಯಾಸಿ ಮಠದ ಬಳಿ ಓರ್ವರನ್ನು ಸಂಪರ್ಕಿಸಿ ಸ್ಕೂಟಿಗೆ 100 ರೂ. ಪೆಟ್ರೋಲ್‌ ಹಾಕಿಸಿಕೊಂಡ ವಿಶ್ವನಾಥ್‌ ಸಾಲ್ಯಾನ್‌ ಆ ಬಳಿಕ ಸ್ಕೂಟಿ ಸಮೇತ ಎತ್ತ ಹೋಗಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಸರಿ ಬಣ್ಣದ ಲುಂಗಿ ಹಾಗೂ ತಿಳಿನೀಲಿ ಬಣ್ಣದ ತುಂಬು ತೋಳಿನ ಅಂಗಿಯನ್ನು ಧರಿಸಿರುವ ಅವರು ಎಣ್ಣೆ ಕಪ್ಪು ಮೈ ಬಣ್ಣ, ದಷ್ಟಪುಷ್ಟ ದೇಹ, ದುಂಡು ಮುಖ, ಬಿಳಿ ತಲೆಗೂದಲು, ಸುಮಾರು 5.7 ಅಡಿ ಎತ್ತರವಿದ್ದಾರೆ. ಯಾರಿಗಾದರೂ ಅವರು ಕಂಡುಬಂದರೆ ಪಡುಬಿದ್ರಿ ಪೊಲೀಸ್‌ ಠಾಣೆ (0820-2555452)ಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next