Advertisement

ತಬ್ಬಿಕೊಳ್ಳುವ ನೆಪದಲ್ಲಿ ವ್ಯಕ್ತಿಯ ಚಿನ್ನದ ಸರ ಕದ್ದ ತೃತೀಯ ಲಿಂಗಿ

01:08 PM Jan 15, 2023 | Team Udayavani |

ಬೆಂಗಳೂರು: ತೃತೀಯ ಲಿಂಗಿಯೊಬ್ಬರು ತಬ್ಬಿಕೊಳ್ಳುವ ನೆಪದಲ್ಲಿ ಕ್ಯಾಬ್‌ಗ ಕಾಯುತ್ತಿದ್ದ ವ್ಯಕ್ತಿಯ ಚಿನ್ನದ ಸರ ದೋಚಿರುವ ಘಟನೆ ಎಂ.ಜಿ.ರಸ್ತೆಯಲ್ಲಿ ನಡೆದಿದೆ.

Advertisement

ತಮಿಳುನಾಡಿನ ಚೆನ್ನೈ ಮೂಲದ 34 ವರ್ಷದ ವ್ಯಕ್ತಿ ಸರ ಕಳೆದುಕೊಂಡವರು.

ಮಾರ್ಕೆಟಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಜ.8ಕ್ಕೆ ಬೆಂಗ ಳೂರಿಗೆ ಬಂದು ಎಂ.ಜಿ. ರಸ್ತೆಯಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಸ್ನೇಹಿತನ ಜತೆಗೆ ಕ್ಯಾಬ್‌ಗ ಕಾಯುತ್ತಿ ದ್ದರು. ಆಗ ಅಲ್ಲಿಗೆ ಬಂದ ತೃತೀಯ ಲಿಂಗಿ, ದೂರು ದಾರನೊಂದಿಗೆ ಅಸಭ್ಯ ವಾಗಿ ವರ್ತಿಸಲು ಮುಂದಾಗಿದ್ದಾರೆ. ಅದಕ್ಕೆ ದೂರು ದಾರ ಒಪ್ಪದಿದ್ದಾಗ ಮೂರ್ನಾಲ್ಕು ಬಾರಿ ತಬ್ಬಿಕೊಂಡು ಕತ್ತಿನ ಲ್ಲಿದ್ದ 1.64 ಲಕ್ಷ ರೂ. ಮೌಲ್ಯದ 32 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾರೆ.

ಕೆಲ ಹೊತ್ತಿನ ಬಳಿಕ ಕುತ್ತಿಗೆ ಬಳಿ ಕೈ ಹಾಕಿದಾಗ ಸರ ಕಸಿದು ಕಳುವಾ ಗಿರುವುದು ಗೊತ್ತಾಗಿದೆ. ನಂತರ ಸ್ನೇಹಿ ತನ ಜತೆ ಅಕ್ಕಪಕ್ಕದ ರಸ್ತೆ ಯಲ್ಲಿ ಹುಡು ಕಾಟ ನಡೆಸಿ, ಪತ್ತೆಯಾಗ ದಿದ್ದಾಗ ಕೊನೆಗೆ ಕಬ್ಬನ್‌ ಪಾರ್ಕ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next