Advertisement

ನದಿಯಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯನ್ನು ತಿಂದು ಹಾಕಿದ ಮೊಸಳೆ

03:49 PM Jul 04, 2017 | Team Udayavani |

ತಂಜಾವೂರು : ಜಿಲ್ಲೆಯ ಕೊಲ್ಲಿದಂ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ 65ರ ಹರೆಯದ ಅನೈಕರಾಯ್‌ ನಿವಾಸಿ ಸೆಲ್ಲಕಣ್ಣು ಎಂಬಾತನನ್ನು ಮೊಸಳೆ ತಿಂದು ಹಾಕಿದ ಭೀಕರ ಘಟನೆ ವರದಿಯಾಗಿದೆ. 

Advertisement

ಸೆಲ್ಲಕಣ್ಣು  ನದಿಯಲ್ಲಿ ಸ್ನಾನ ಮಾಡಿಕೊಂಡಿದ್ದಾಗ ಇದ್ದಕ್ಕಿದ್ದಂತೆಯೇ ನೀರಿನಲ್ಲಿ ಧಾವಿಸಿ ಬಂದ ಮೊಸಳೆಯು ಆತನ ಮೇಲೆ ಎರಗಿ ಕಚ್ಚಿ ಆತನನ್ನು ನದಿಯಾಳಕ್ಕೆ ಒಯ್ದಿತು. ಆತನ ಆಕ್ರಂದನ ಕೇಳಿಸಿಕೊಂಡ ಅಲ್ಲೇ ಇದ್ದ ಮೀನುಗಾರರು ಒಡನೆಯೇ ಆತನ ನೆರವಿಗೆ ಧಾವಿಸಿದರು. ಆದರೆ ಪ್ರಯೋಜನವಾಗಲಿಲ್ಲ. 

ಬಳಿಕ ಆತನ ಶವವನ್ನು ಮೀನುಗಾರರು ಪತ್ತೆ ಹಚ್ಚಿದರು. ಆದರೆ ಅದರ ಬಹುಭಾಗವನ್ನು ಮೊಸಳೆ ತಿಂದು ಹಾಕಿತ್ತು. 

ಸುದ್ದಿ ತಿಳಿದು ಧಾವಿಸಿ ಬಂದ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next