Advertisement

Udupi ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ

11:15 PM Jul 24, 2024 | Team Udayavani |

ಉಡುಪಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದು, ಗಂಭೀರ ಗಾಯಗೊಂಡಿದ್ದ ಮಧ್ಯಪ್ರದೇಶದ ನಿವಾಸಿ ರಾಮಪಾಲ್‌ (44) ನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

Advertisement

ಉದ್ಯೋಗ ನಿಮಿತ್ತ ಅವರು ಸುರತ್ಕಲ್‌ಗೆ ಹೋಗುತ್ತಿದ್ದರು. ಇಂದ್ರಾಳಿಯ ರೈಲು ನಿಲ್ದಾಣಕ್ಕೆ ನಿಧಾನಗತಿಯಲ್ಲಿ ರೈಲು ಸೇತುವೆ ಬಳಿ ಬರುತ್ತಿದ್ದಂತೆ ಬಾಗಿಲ ಬಳಿ ನಿಂತಿದ್ದ ಅವರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ರೈಲು ನಿಧಾನಗತಿಯಲ್ಲಿ ಇದ್ದದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next