Advertisement

Alappuzha ; ಏಕಾಏಕಿ ಕಾರು ಸ್ಪೋಟಗೊಂಡು ಯುವಕ ಮೃತ್ಯು

05:51 PM Aug 07, 2023 | Team Udayavani |

ಅಲಪ್ಪುಳ: ಇಲ್ಲಿಗೆ ಸಮೀಪದ ಮಾವೇಲಿಕ್ಕಾರದಲ್ಲಿ ಕಾರು ಇದ್ದಕ್ಕಿದ್ದಂತೆ ಸ್ಫೋಟಗೊಂಡ ಕಾರಣ 35 ವರ್ಷದ ವ್ಯಕ್ತಿಯೊಬ್ಬರು ಕಾರಿನೊಳಗೆ ಸುಟ್ಟು ಕರಕಲಾದ ಘಟನೆ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮಧ್ಯರಾತ್ರಿಯ ನಂತರ (ಸೋಮವಾರ 12.30) ಕಾರು ಮನೆಯ ಕಾಂಪೌಂಡ್‌ಗೆ ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಸ್ಫೋಟಗೊಂಡಿದ್ದು ಕೃಷ್ಣ ಪ್ರಕಾಶ್ ಹೊರ ಬರಲಾಗದೆ ಸುಟ್ಟು ಕರಕಲಾಗಿದ್ದಾರೆ.

ಮೃತ ಕೃಷ್ಣ ಪ್ರಕಾಶ್ ಅವಿವಾಹಿತನಾಗಿದ್ದು, ಸಹೋದರನೊಂದಿಗೆ ವಾಸಿಸುತ್ತಿದ್ದರು. ಮಾವೇಲಿಕ್ಕರ ಪಟ್ಟಣದಲ್ಲಿ ಕಂಪ್ಯೂಟರ್ ಅಂಗಡಿ ನಡೆಸುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಮೋಟಾರು ವಾಹನ ಇಲಾಖೆಯ ಅಧಿಕಾರಿಗಳು ಕಾರನ್ನು ಪರಿಶೀಲಿಸಿದ್ದು, ಸ್ಫೋಟಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನುವುದನ್ನು ತಳ್ಳಿಹಾಕಿದ್ದಾರೆ. ಕಾರನ್ನು ಪರೀಕ್ಷಿಸಿದ ನಂತರ, ಬೆಂಕಿ ಹೊತ್ತಿಕೊಂಡ ಬಳಿಕ ವಾಹನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸುಳಿವುಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರಿನ ಇಂಜಿನ್ ಭಾಗಕ್ಕೆ ಬೆಂಕಿ ತಗುಲಿದ ಬಗ್ಗೆ ವರದಿಯಾಗಿಲ್ಲ. ಕಾರಿನ ಹಿಂಬದಿ ಸುಟ್ಟು ಕರಕಲಾಗಿದೆ. ಕಾರಿನ ಮುಂಭಾಗದಲ್ಲಿದ್ದ ಫ್ಯೂಸ್ ಘಟಕದ ಬಗ್ಗೆ ಯಾವುದೇ ಪ್ರಮುಖ ದೂರು ವರದಿಯಾಗಿಲ್ಲ,  ಅದರ ಬ್ಯಾಟರಿಗೆ ಪರಿಣಾಮ ಬೀರಿಲ್ಲ.
ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next