Advertisement

ಬೆಂಗಾವಲು ವಾಹನ ತಡೆದು ರಾದ್ಧಾಂತ

11:18 PM Nov 21, 2022 | Team Udayavani |

ಕೊಚ್ಚಿ: ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌. ಮಣಿಕುಮಾರ್‌ ಅವರ ಬೆಂಗಾವಲು ವಾಹನವನ್ನು ತಡೆದು, ರಾದ್ಧಾಂತ ಮಾಡಿದ 34 ವರ್ಷದ ವ್ಯಕ್ತಿಯನ್ನು  ಪೊಲೀಸರು ಬಂಧಿಸಿದ್ದಾರೆ.

Advertisement

ಇಡುಕ್ಕಿ ಮೂಲದ ತಿಜೊ ಬಂಧಿತ ಆರೋಪಿ. ರವಿವಾರ ರಾತ್ರಿ ಕೊಚ್ಚಿ ವಿಮಾನ ನಿಲ್ದಾಣದಿಂದ ತಮ್ಮ ಅಧಿಕೃತ ನಿವಾಸಕ್ಕೆ ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ತೆರಳುತ್ತಿದ್ದರು. ಈ ವೇಳೆ ಗೋಶ್ರೀ ಸೇತುವೆ ಸಮೀಪ ಮದ್ಯದ ನಶೆಯಲ್ಲಿದ್ದ ಆರೋಪಿ ಅವರ ಬೆಂಗಾವಲು ವಾಹನವನ್ನು ತಡೆದು ನಿಲ್ಲಿಸಿದ್ದಾನೆ. ಅಲ್ಲದೇ ಅವರ ಗನ್‌ಮ್ಯಾನ್‌ನೊಂದಿಗೆ ಜಗಳವಾಡಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next