Advertisement

ಹುಬ್ಬಳ್ಳಿ: ಕಿರುಕುಳ ತಾಳಲಾರದೆ ಮಗನಿಗೆ ಚಾಕುವಿನಿಂದ ಇರಿದ ತಂದೆ!

02:36 PM Jul 12, 2022 | Team Udayavani |

ಹುಬ್ಬಳ್ಳಿ: ಮಗನ ಅತಿಯಾದ ಕಿರುಕುಳಕ್ಕೆ ರೋಸಿಹೋದ ತಂದೆಯೇ ಚಾಕುವಿನಿಂದ ಇರಿದು ಮಗನನ್ನು ಗಾಯಗೊಳಿಸಿದ ಘಟನೆ ಮಂಗಳವಾರ ಬೆಳಗಿನ ಜಾವ ಇಲ್ಲಿನ ಹಳೇಹುಬ್ಬಳ್ಳಿ ಹೆಗ್ಗೇರಿಯ ಆಯುರ್ವೇದ ಕಾಲೇಜ್ ಬಳಿ ನಡೆದಿದೆ.

Advertisement

ಜಗದೀಶ ಸುಗೂರ ಗಾಯಗೊಂಡಿದ್ದು, ಕ್ಷೌರಿಕ ಕೆಲಸ ಮಾಡಿಕೊಂಡಿರುವ ಈತನ ತಂದೆ ಶಂಕರ ಸುಗೂರ ಹಲ್ಲೆ ಮಾಡಿದವರು.

ಜಗದೀಶನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದು, ತಂದೆ-ತಾಯಿಗೆ ಪದೇ ಪದೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದು ಹಾಗೂ ಜಗಳ ಮಾಡುವುದು, ಕೈಗೆ ಸಿಕ್ಕ ವಸ್ತುಗಳನ್ನು ಒಗೆಯುವುದು, ಹೊಡೆಯುವುದು ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಸ್ಪಾ,ಸಲೂನ್‌ ಹೆಸರಿನಲ್ಲಿ ವೇಶ್ಯಾವಾಟಿಕೆ: ನೌಕರಿ ಕೊಡಿಸುವುದಾಗಿ ನಂಬಿಸಿ ದಂಧೆಗೆ ಬಳಕೆ

ಮಂಗಳವಾರ ಬೆಳಗ್ಗೆಯೂ ಇದೇ ರೀತಿ ಮಾಡುತ್ತಿದ್ದಾಗ ಸಿಟ್ಟಾದ ಶಂಕರ ಮನೆಯಲ್ಲಿದ್ದ ಚಾಕುವಿನಿಂದ ಬೆನ್ನಿಗೆ ಇರಿದಿದ್ದು, ಚಾಕು ಅಲ್ಲಿಯೇ ಸಿಕ್ಕಿ ಹಾಕಿಕೊಂಡಿದ್ದು, ಹಿಡಕಿ ಮಾತ್ರ ಬಂದಿದೆ. ಗಾಯಗೊಂಡಿರುವ ಜಗದೀಶ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Advertisement

ಹಳೇಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next