Advertisement

ಸಾರಾಯಿ ಹಣಕ್ಕಾಗಿ ಅಜ್ಜಿಯನ್ನೇ ಸಾಯಿಸಿದ ಮೊಮ್ಮಗ

12:04 PM Jul 06, 2021 | Team Udayavani |

ಧಾರವಾಡ: ಮದ್ಯ ಕುಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಮೊಮ್ಮಗನೊಬ್ಬ ತನ್ನ ಅಜ್ಜಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಗೆ ವಿದ್ಯಾನಗರಿ ಧಾರವಾಡ ಸಾಕ್ಷಿಯಾಗಿದೆ.

Advertisement

ಇಲ್ಲಿನ  ಜಯನಗರ ಕೊನೆ ಬಸ್ ಸ್ಟಾಪ್ ಬಳಿ ಇರುವ ದುರ್ಗಾದೇವಿ ಕಾಲೊನಿಯಲ್ಲಿ ಸೋಮವಾರ ತಡರಾತ್ರಿ ಈ ಅಮಾನವೀಯ ಘಟನೆ ನಡೆದಿದೆ.

ಭೀಮವ್ವ ಶಿಂಧೆ (70 ವ) ಎಂಬುವವರೇ ಮೊಮ್ಮಗನಿಂದ ಹತ್ಯೆಗೀಡಾದ ದುರ್ದೈವಿ ಅಜ್ಜಿ.

ಕೈ ಕಾಸು ನೀಡಿ ಮೊಮ್ಮಗ ಚೆನ್ನಾಗಿ ಓದಿ ಬೆಳೆಯಲೆಂದು ಶ್ರಮಿಸುತ್ತಿದ್ದ ಅಜ್ಜಿಗೆ ತಾನೆ ಪೋಷಣೆ ಮಾಡಿದ ಕೈ ತನ್ನ ಜೀವ ತೆಗೆಯುತ್ತದೆ ಎಂಬುದು ಗೊತ್ತಾಗಲೇ ಇಲ್ಲ.

ದತ್ತಾತ್ರೇಯ ಎಂಬಾತ ಪ್ರತಿದಿನ ಮದ್ಯ ಕುಡಿಯಲು ಹಣ ಕೊಡಿ ಎಂದು ತನ್ನ ತಾಯಿ ಹಾಗೂ ಅಜ್ಜಿಯೊಂದಿಗೆ ಜಗಳ ಮಾಡುತ್ತಿದ್ದ. ಈ ಬಗ್ಗೆ ಸೋಮವಾರ ರಾತ್ರಿ ಕೂಡ ಜಗಳ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ದತ್ತಾತ್ರೇಯ ರಾಡ್‌ನಿಂದ ತನ್ನ ಅಜ್ಜಿ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ಇದಲ್ಲದೇ ತನ್ನ ತಾಯಿ ಗೌರವ್ವಳ ಮೇಲೂ ಹಲ್ಲೆ ಮಾಡಿದ್ದು, ಆಕೆಯೂ ಗಂಭೀರವಾಗಿ ಗಾಯಗೊಂಡಿದ್ದಾಳೆ.

Advertisement

ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next