Advertisement

ಜಲಾಶಯದ ಗೋಡೆ ಹತ್ತಲು ಹೋಗಿ ಜಾರಿ ಬಿದ್ದ ಯುವಕ; ವಿಡಿಯೋ ವೈರಲ್

01:17 PM May 23, 2022 | Team Udayavani |

ಚಿಕ್ಕಬಳ್ಳಾಪುರ: ಯುವಕನೊಬ್ಬ ಜಲಾಶಯ ಹತ್ತುವ ಸಾಹಸ ಮಾಡಲು ಹೋಗಿ ಕೆಳಗೆ ಬಿದ್ದಿರುವ ಘಟನೆ ರವಿವಾರ ಸಂಜೆ ನಡೆದಿದೆ.

Advertisement

ಗೌರಿಬಿದನೂರು ಮೂಲದ ಯುವಕನೊಬ್ಬ ಶ್ರೀನಿವಾಸ ಸಾಗರ ಜಲಾಶಯವನ್ನು ಹತ್ತುವ ಹುಚ್ಚಾಟವನ್ನು ಮಾಡಲು ಹೋಗಿದ್ದಾನೆ. ಸ್ವಲ್ಪ ಎತ್ತರವನ್ನು ಏರಿದ ಯುವಕ ಒಮ್ಮೆಲೇ ಕೆಳಗೆ ಬಿದ್ದು ಗಾಯ ಮಾಡಿಕೊಂಡಿದ್ದಾನೆ. ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ದೆಹಲಿಯಲ್ಲಿ ಭಾರೀ ಗಾಳಿ, ಮಳೆ; ರಸ್ತೆಗೆ ಉರುಳಿ ಬಿದ್ದ ಮರಗಳು- ಜನಜೀವನ ಅಸ್ತವ್ಯಸ್ತ

ರವಿವಾರ ರಜಾದಿನವಾದ ಕಾರಣ ಜನರು ಹೆಚ್ಚು ಸೇರಿದ್ದರು. ಇವರ ಎದುರು ಯುವಕ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ನೀರು ಹರಿಯುತ್ತಿದ್ದ ಜಲಾಶಯದ ಗೋಡೆ ಹತ್ತಲು ಪ್ರಯತ್ನ ನಡೆಸಿದ್ದಾನೆ. ಅರ್ಧಕ್ಕಿಂತ ಹೆಚ್ಚು ಏರಿದ್ದ ಯುವಕ ಜಾರಿ ಬೀಳುವ ಭಯಾನಕ ದೃಶ್ಯವು ಮೊಬೈಲ್ ನಲ್ಲಿ ಸೆರೆಯಾಗಿದೆ.

Advertisement

ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next