Advertisement

ಕೋವಿಡ್ ಪಾಸಿಟಿವ್ ಹಿನ್ನೆಲೆ ತಲೆಗೆ ಶೂಟ್ ಮಾಡಿಕೊಂಡು ನಿವೃತ್ತ ಉಪತಹಶೀಲ್ದಾರ್ ಆತ್ಮಹತ್ಯೆ!

10:11 AM May 10, 2021 | Team Udayavani |

ಚಿಕ್ಕಮಗಳೂರು : ತನಗೆ ಕೋವಿಡ್ ಪಾಸಿಟಿವ್ ಆಗಿದ್ದು, ತನ್ನಿಂದ ಮನೆ ಮಂದಿಗೆಲ್ಲಾ ಸೋಂಕು ಹರಡುತ್ತೆಂದು ಭಯಗೊಂಡು ನಿವೃತ್ತ ಉಪ ತಹಶೀಲ್ದಾರ್ ರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

Advertisement

ಜಿಲ್ಲೆಯ ತರೀಕೆರೆ ತಾಲೂಕಿನ ಬೇಲೇನಹಳ್ಳಿ ತಾಂಡ್ಯದಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಉಪ ತಹಸೀಲ್ದಾರ್ ಸೋಮನಾಯ್ಕ್ ಅವರು ಬಂದೂಕಿನಿಂದ ತಲೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಲಾಕ್ ಡೌನ್ ಗೆ ಕಾಫಿನಾಡು ಸ್ತಬ್ಧ, ಜನಜೀವನ ಸ್ಥಗಿತ: ರಸ್ತೆಗಿಳಿದರೆ ಲಾಠಿ ಏಟು

ತೋಟದಲ್ಲಿ ಕಾರಿನಲ್ಲಿ ಕುಳಿತು ತಲೆಗೆ ಬಂದೂಕಿನಿಂದ ಶೂಟ್ ಮಾಡಿಕೊಂಡಿರುವ ಸೋಮ ನಾಯ್ಕ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ತನ್ನಿಂದ ಮನೆಮಂದಿಗೆಲ್ಲಾ ಕೋವಿಡ್ ಸೋಂಕು ಹರಡಬಹುದು ಎನ್ನುವ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಿದ್ದಾರೆ.

ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸತ್ತಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next