Advertisement

ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು

03:49 PM Jul 06, 2019 | Suhan S |

ಸಂಬರಗಿ: ರಸ್ತೆಯ ಬದಿಗೆ ಇರುವ ತೆರೆದ ಬಾವಿಗೆ ಗುರುವಾರ ರಾತ್ರಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಶಿರೂರ ಗ್ರಾಮದ ಹೊರವಲಯದ ತೋಟದ ವಸತಿಯಲ್ಲಿರುವ ಪುಂಡಲೀಕ ಪಾಂಡುರಂಗ ಶಿಂದೆ (60) ಗ್ರಾಮದಿಂದ ತೋಟದ ವಸತಿ ಮನೆಗೆ ತೆರಳುವಾಗ ಘಟನೆ ನಡೆದಿದೆ. ರಾತ್ರಿ ವೇಳೆ ತೋಟಕ್ಕೆ ತೆರಳುವಾಗ ಸ್ವಲ್ಪ ಮಳೆಯಾಗಿ ರಸ್ತೆ ಬದಿಗೆ ಇರುವ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಈ ತೆರೆದ ಬಾವಿ ಸುಮಾರು 20 ಅಡಿ ಆಳ ಇದ್ದು ಶವವನ್ನು ತೆರೆದ ಬಾವಿಯಿಂದ ಹೊರ ತರುವುದು ಅಸಾಧ್ಯವಾಯಿತು. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ಠಾಣಾಧಿಕಾರಿ ಆರ್‌.ಕೆ.ಸಂಬೋಜಿ, ಎನ್‌.ಎಸ್‌.ಶಿರವಾಡೆ. ಎಸ್‌.ಎಸ್‌. ಶಿಂದೆ ಹಾಗೂ ಸುರೇಶ ಮಾದರ ಆಗಮಿಸಿ ಬಾವಿಯಿಂದ ಶವವನ್ನು ಹೊರ ತಂದರು. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next