Advertisement

ಅಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್‌ ಅವರ ಮಂದಿರ ;ವಿಗ್ರಹಕ್ಕೆ ಪೂಜೆ

06:01 PM Sep 19, 2022 | Team Udayavani |

ಅಯೋಧ್ಯೆ : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಅಯೋಧ್ಯೆಯಲ್ಲಿ ವ್ಯಕ್ತಿಯೊಬ್ಬರು ಮಂದಿರ ನಿರ್ಮಿಸಿದ್ದಾರೆ. ಇದು ರಾಮ ಜನ್ಮಭೂಮಿಯಿಂದ 15 ಕಿ.ಮೀ ದೂರದಲ್ಲಿದೆ.

Advertisement

ಮಸೌಧ ಬ್ಲಾಕ್‌ನ ಮೌರ್ಯದ ಯುವಕ ಪ್ರಭಾಕರ್ ಮೌರ್ಯ ಅಯೋಧ್ಯೆ ರಾಮ ಜನ್ಮಭೂಮಿಯಿಂದ 15 ಕಿಮೀ ಮತ್ತು ಭರತ್‌ನ ತಪೋಸ್ಥಲಿಯಲ್ಲಿ ಭಾರತ್ ಕುಂಡ್‌ನಿಂದ 3 ಕಿಮೀ ದೂರದಲ್ಲಿ ವಾಸಿಸುತ್ತಿದ್ದು, ಸಿಎಂ ಕಾರ್ಯದಿಂದ ಪ್ರಭಾವಿತರಾದ ಅವರು ಗ್ರಾಮದಲ್ಲಿ  ದೇವಸ್ಥಾನ ಕಟ್ಟಿಸಿದ್ದಾರೆ.

‘ಯೋಗಿ ಮಂದಿರ’ ಎಂದು ಕರೆಯಲ್ಪಡುವ ಈ ದೇವಾಲಯವು ಒಳಗೆ ಯೋಗಿ ಆದಿತ್ಯನಾಥರ ಗಾತ್ರದ ವಿಗ್ರಹವನ್ನು ಹೊಂದಿದೆ. ಪ್ರತಿಮೆಯು ಕೇಸರಿ ನಿಲುವಂಗಿಯನ್ನು ಧರಿಸಿದ್ದು, ಬಿಲ್ಲು ಮತ್ತು ಬಾಣವನ್ನು ಹೊಂದಿದೆ. ಆದಿತ್ಯನಾಥ್ ಅವರ ನಿಷ್ಠಾವಂತ ಅನುಯಾಯಿ ಮೌರ್ಯ ಅವರು ಈಗ ಸಿಎಂಗೆ ಮೀಸಲಾಗಿರುವ ಸ್ತೋತ್ರಗಳನ್ನು ಸಿದ್ಧಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next