Advertisement

ನಡು ರಸ್ತೆಯಲ್ಲೇ ವ್ಯಕ್ತಿಯನ್ನು ಕೋಲಿನಿಂದ ಹೊಡೆದು ಕೊಂದ ದುಷ್ಟರು! ಮೂಕ ಪ್ರೇಕ್ಷಕರಾದ ಜನ

12:19 PM Dec 29, 2020 | sudhir |

ಲಕ್ನೌ : ಇಬ್ಬರು ವ್ಯಕ್ತಿಗಳು ಹಾಡ ಹಗಲೇ ನಡುರಸ್ತೆಯಲ್ಲಿ ವ್ಯಕ್ತಿಯೊಬ್ಬನನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಸಂಭವಿಸಿದೆ.

Advertisement

ನೂರಾರು ಜನ ಸಂಚಾರ ನಡೆಸುತ್ತಿರುವ ಪ್ರಮುಖ ರಸ್ತೆಯಲ್ಲಿ ಘಟನೆ ನಡೆಯುತ್ತಿದ್ದರೆ, ಅತ್ತ ಕೆಲವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತಿದ್ದರು ಇನ್ನು ಕೆಲವರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ದರು. ಆದರೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತಿದ್ದವನನ್ನು ರಕ್ಷಿಸುವ ಕೆಲಸ ಯಾರು ಮಾಡಲಿಲ್ಲ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕೆಲ ಸಮಯದ ಬಳಿಕ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಆದರೆ ಆ ವ್ಯಕ್ತಿ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಲಾಕ್ ಡೌನ್, ಸೀಲ್ ಡೌನ್ ಅಗತ್ಯವಿಲ್ಲ, ಶಾಲಾರಂಭಕ್ಕೆ ತೊಂದರೆಯಿಲ್ಲ: ಸಚಿವ ಸುಧಾಕರ್

ಮೃತಪಟ್ಟ ವ್ಯಕ್ತಿಯನ್ನು ಅಜಯ್ ಎನ್ನಲಾಗಿದೆ, ಆರೋಪಿಗಳನ್ನು ಗೋವಿಂದ್ ಹಾಗೂ ಅಮಿತ್ ಎಂದು ಹೇಳಲಾಗಿದೆ.
ಘಟನೆ ಕುರಿತು ಅಜಯ್ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಆದರೆ ಪೊಲೀಸರು ಕೇಸು ದಾಖಲಿಸಿಕೊಳ್ಳದೆ ರಾಜಿ ನಡೆಸಲು ಮುಂದಾಗಿದ್ದಾರೆ.

Advertisement

ಈ ಹಿಂದೆ ಅಜಯ್ ಸಹೋದರ ಹಾಗೂ ಗೋವಿಂದ್ ನಡುವೆ ಹೂವಿನ ಅಂಗಡಿ ವಿಚಾರವಾಗಿ ವೈಮನಸ್ಸು ಏರ್ಪಟ್ಟಿತ್ತು ಆದರೆ ಅಜಯ್ ನನ್ನು ಕೊಲೆ ಮಾಡಲು ಏನು ಕಾರಣ ಎಂಬುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next